ಕರ್ನಾಟಕ

karnataka

By

Published : Jan 15, 2020, 1:26 PM IST

ETV Bharat / state

ಮಾ.​ 5 ರಂದು ರಾಜ್ಯ ಬಜೆಟ್ ಮಂಡನೆ : ಸಿಎಂ ಯಡಿಯೂರಪ್ಪ ಘೋಷಣೆ

ನಿನ್ನೆ ಸಿಎಂ ಹಿಂದೆಯೇ ಸುಳಿದಾಡುತ್ತಿದ್ದ ಶಾಸಕ ನಿರಾಣಿ ಇಂದು ಬಿಎಸ್​ವೈ ಆಗಮನದ ವೇಳೆ ಹೆಲಿಪ್ಯಾಡ್​ಗೆ ಆಗಮಿಸಲಿಲ್ಲ. ಇದರಿಂದ ಸಿಎಂ ವಿರುದ್ಧ ಮುರುಗೇಶ್ ನಿರಾಣಿ ಮುನಿಸಿಕೊಂಡರಾ ಎಂಬ ಅನುಮಾನ ಕಾಡತೊಡಗಿದೆ.

B. S. Yediyurappa
ಸಿಎಂ ಯಡಿಯೂರಪ್ಪ

ದಾವಣಗೆರೆ: ಮಾರ್ಚ್​ 5 ರಂದೇ ರಾಜ್ಯ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ

ನಗರದ ಜಿಎಂಐಟಿ ಹೆಲಿಪ್ಯಾಡ್ ನಲ್ಲಿ‌ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರೈತ ಮಗನಾದ ನಾನು ರೈತರು, ಸಾಮಾನ್ಯ ಜನರ ಕಷ್ಟಗಳ ಬಗ್ಗೆ ಅರಿವಿದೆ. ಹಣಕಾಸಿನ ಇತಿಮಿತಿ ನೋಡಿಕೊಂಡು ಆಯವ್ಯಯ ಮಂಡನೆ ಮಾಡುತ್ತೇನೆ ಎಂದು ಹೇಳಿದರು.

ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಕುರಿತಂತೆ ಸ್ಪಷ್ಟವಾಗಿ ಹೇಳದ ಯಡಿಯೂರಪ್ಪ, ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸದೇ ತೆರಳಿದರು. ಹರಿಹರದ ಪಂಚಮಸಾಲಿ‌‌ ಮಠದಲ್ಲಿ ನಿನ್ನೆ ವಚನಾನಂದ ಸ್ವಾಮೀಜಿ ವಿರುದ್ಧ ಗರಂ ಆಗಿದ್ದ ಸಿಎಂ ಮತ್ತೆ ಈ ಬಗ್ಗೆ ಪ್ರಶ್ನೆ ಎದುರಾಗಬಹುದು ಎಂದುಕೊಂಡು ಹಾಗೇ ಹೋದರು.

ಸಿಎಂ ಮೇಲೆ ಮುನಿಸಿಕೊಂಡರಾ ಮುರುಗೇಶ್ ನಿರಾಣಿ...?

ನಿನ್ನೆ ಸಿಎಂ ಹಿಂದೆಯೇ ಸುಳಿದಾಡುತ್ತಿದ್ದ ಶಾಸಕ ನಿರಾಣಿ ಇಂದು ಬಿಎಸ್​ವೈ ಆಗಮನದ ವೇಳೆ ಹೆಲಿಪ್ಯಾಡ್​​​ಗೆ ಆಗಮಿಸಲಿಲ್ಲ ಇದರಿಂದ ಸಿಎಂ ಮೇಲೆ ಮುರುಗೇಶ್ ನಿರಾಣಿ ಮುನಿಸಿಕೊಂಡರಾ ಎಂಬ ಅನುಮಾನ ಕಾಡತೊಡಗಿದೆ.

ನಿನ್ನೆ ಹರಿಹರದ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಶ್ರೀ, ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡುವಂತೆ ಸಿಎಂ ಸಮ್ಮುಖದಲ್ಲಿ ಒತ್ತಾಯ ಮಾಡಿದ್ದರು. ಇದು ಯಡಿಯೂರಪ್ಪ ಅವರನ್ನು ಕೆಂಡಮಂಡಲರಾಗುವಂತೆ ಮಾಡಿತ್ತು. ಈ ವೇಳೆ ಶ್ರೀಗಳ ಎದುರೇ ಸಿಎಂ ಯಡಿಯೂರಪ್ಪ ಅವರು ನಿರಾಣಿ ಮೇಲೆ ಕೋಪಗೊಂಡಿದ್ದರು.ಹೀಗಾಗಿ ಇಂದು ದಾವಣಗೆರೆಗೆ ಬಂದಿದ್ದರೂ ಮುರುಗೇಶ್ ನಿರಾಣಿ ಹೆಲಿಪ್ಯಾಡ್ ಗೆ ಆಗಮಿಸದೇ ಬೇಸರ ತೋರ್ಪಡಿಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details