ಕರ್ನಾಟಕ

karnataka

ಶೀಘ್ರವೇ ಶಿವಮೊಗ್ಗ ರಸ್ತೆಯಲ್ಲಿ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಆದ್ಯತೆ: ಶಾಸಕ ಎಸ್.ರಾಮಪ್ಪ

By

Published : Aug 18, 2020, 7:14 PM IST

ನಗರದ ರಚನಾ ಕ್ರೀಡಾ ಟ್ರಸ್ಟ್ ಬಳಿ ನಗರಸಭೆ ವತಿಯಿಂದ ದೀನದಯಾಳ್ ಯೋಜನೆಯಡಿಯ 47 ಲಕ್ಷ ರೂ, ಅನುದಾನದ 36 ಮಳಿಗೆಗಳ ಕಟ್ಟಡ ಕಾಮಗಾರಿಗೆ ಶಾಸಕ ಎಸ್. ರಾಮಪ್ಪ ಭೂಮಿ ಪೂಜೆ ನೆರವೇರಿಸಿದರು.

Road construction
Road construction

ಹರಿಹರ :ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗು ಗ್ರಾಮೀಣ ಪ್ರದೇಶದ ರೈತರಿಗೆ ಅನುಕೂಲದ ದೃಷ್ಟಿಯಿಂದ ಹಾಗೂ ಶಿವಮೊಗ್ಗ ರಸ್ತೆಯಲ್ಲಿನ ಜನದಟ್ಟಣೆಯ ನಿಯಂತ್ರಣಕ್ಕಾಗಿ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರದಲ್ಲಿ ಆದ್ಯತೆ ನೀಡಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.

ನಗರದ ರಚನಾ ಕ್ರೀಡಾ ಟ್ರಸ್ಟ್ ಬಳಿ ನಗರಸಭೆ ವತಿಯಿಂದ ದೀನದಯಾಳ್ ಯೋಜನೆಯಡಿಯ 47 ಲಕ್ಷ ರೂ, ಅನುದಾನದ 36 ಮಳಿಗೆಗಳ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನಗರದ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ತರುವ ಆಲೋಚನೆ ಇದ್ದು, ಅನೇಕ ಯೋಜನೆಗಳು ಶೀಘ್ರದಲ್ಲಿಯೇ ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು.

ನಗರದ ಹೃದಯಭಾಗದಲ್ಲಿರುವ ಆರೋಗ್ಯ ಇಲಾಖೆಯ ಆವರಣದಲ್ಲಿನ ಖಾಲಿ ಜಾಗದಲ್ಲಿ ಆಧುನಿಕ ಸೌಲಭ್ಯಗಳುಳ್ಳ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಆದಷ್ಟು ಬೇಗನೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ರಾಜಕಾಲುವೆ ಮೇಲೆ ಕಟ್ಟಲ್ಪಡುವ ಮಾರುಕಟ್ಟೆ ಸಂಕೀರ್ಣಕ್ಕೆ ನಾನು ಅಲ್ಲಿನ ಕಾಮಗಾರಿಗೆ ಖಂಡಿತ ವಿರೋಧಿಸಿಲ್ಲ ಅಲ್ಲಿ ತೊಂದರೆಯಾಗುವ ನಿವಾಸಿಗಳಿಗೆ ಪರಿಹಾರದ ವ್ಯವಸ್ಥೆ ಮಾಡಿ ಕಾಮಗಾರಿ ಪ್ರಾರಂಭಿಸಿಕೊಳ್ಳಿ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಪೌರಾಯುಕ್ತೆ ಎಸ್.ಲಕ್ಷ್ಮೀ ಮಾತನಾಡಿ ಗಾಂಧಿ ಸರ್ಕಲ್ ಬಳಿ ಇರುವ ಮಹಾತ್ಮ ಗಾಂಧಿ ಕಾಂಪ್ಲೆಕ್ಸ್ ನವೀಕರಣಕ್ಕಾಗಿ 34 ಲಕ್ಷ ರೂ ಅನುದಾನ ಮಂಜೂರಾಗಿದ್ದು ಕೆಲಸ ಪ್ರಾರಂಭಿಸಲಾಗುವುದು. ನಗರಸಭೆಯ ವ್ಯಾಪ್ತಿಯಲ್ಲಿರುವ ಮಳಿಗೆಗಳ ಬಾಡಿಗೆಗಳ ವಸೂಲಿಗೂ ಸಹ ಕ್ರಮ ಕೈಗೊಳ್ಳಲಾಗುವುದು. ಇದರಿಂದ ನಗರಸಭೆಯ ಆದಾಯ ಹೆಚ್ಚಿಸುವಲ್ಲಿ ಗಮನಹರಿಸುತ್ತೇನೆ ಎಂದು ಹೇಳಿದರು.

ಈ ವೇಳೆ ನಗರಸಭಾ ಸದಸ್ಯರುಗಳಾದ ಎಸ್. ಎಂ.ವಸಂತ್, ಪಿ.ಎನ್. ವಿರೂಪಾಕ್ಷ, ಆರ್.ದಿನೇಶ್ ಬಾಬು, ಕೆ.ಜಿ.ಸಿದ್ದೇಶ್, ವಿಜಯ್ ಕುಮಾರ್ ಮತ್ತಿತರರುಹಾಜರಿದ್ದರು.

ABOUT THE AUTHOR

...view details