ಕರ್ನಾಟಕ

karnataka

By

Published : May 27, 2020, 9:40 AM IST

ETV Bharat / state

ದಾವಣಗೆರೆಯಲ್ಲಿ ಹೆಡ್ ಕಾನ್ಸ್​ಸ್ಟೇಬಲ್ ಸೇರಿ 15 ಮಂದಿ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್​

ದಾವಣಗೆರೆಯಲ್ಲಿ ಪೊಲೀಸ್ ಹೆಡ್ ಕಾನ್ಸ್​ಸ್ಟೇಬಲ್ ಸೇರಿ 15 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಐಜಿಪಿ ಎಸ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಎಸ್‍ಪಿ ರಾಜೀವ್, ಎಡಿಸಿ ಪೂಜಾರ್, ವೈದ್ಯಕೀಯ ಸಿಬ್ಬಂದಿ ಪುಷ್ಪ ಎರಚಿ, ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

5 corona patients release from davanagere covid hospital
ಹೆಡ್ ಕಾನ್ಸ್​ಸ್ಟೆಬಲ್ ಸೇರಿ 15 ಮಂದಿ ಗುಣಮುಖ..ಆಸ್ಪತ್ರೆಯಿಂದ ಬಿಡುಗಡೆ

ದಾವಣಗೆರೆ:ಪೊಲೀಸ್ ಹೆಡ್ ಕಾನ್ಸ್​ಸ್ಟೇಬಲ್ ಸೇರಿ 15 ಮಂದಿ ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಹೆಡ್ ಕಾನ್ಸ್​ಸ್ಟೇಬಲ್ ಸೇರಿ 15 ಮಂದಿ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾದ 15 ಮಂದಿಗೆ ಐಜಿಪಿ ಎಸ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಎಸ್‍ಪಿ ರಾಜೀವ್, ಎಡಿಸಿ ಪೂಜಾರ್, ವೈದ್ಯಕೀಯ ಸಿಬ್ಬಂದಿ ಹೂ ಎರಚಿ, ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು. ಜಿಲ್ಲೆಯಲ್ಲಿ ಒಟ್ಟು 136 ಪ್ರಕರಣಗಳ ಪೈಕಿ 65 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಹೆಡ್​ ಕಾನ್ಸ್​ಸ್ಟೇಬಲ್ ಪ್ರಥಮ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದವರ ಸ್ಯಾಂಪಲ್​ಗಳು ನೆಗೆಟಿವ್ ಬಂದಿವೆ. ಕೆಟಿಜೆ ನಗರ ಕಂಟೇನ್ಮೆಂಟ್​ ಝೋನ್​​ನಲ್ಲಿ ಕರ್ತವ್ಯ ನಿರ್ವಹಿಸುವಾಗ ಇವರಿಗೆ ಕೊರೊನಾ‌ ತಗುಲಿತ್ತು.

ABOUT THE AUTHOR

...view details