ಕರ್ನಾಟಕ

karnataka

By

Published : Jul 18, 2022, 3:14 PM IST

ETV Bharat / state

ಸ್ನಾನಗೃಹದಲ್ಲಿ ವಿದ್ಯುತ್ ಕಾಯಿಲ್ ತಗುಲಿ ಶಾಕ್: ವ್ಯಕ್ತಿ ಸಾವು

ಹೇಮಚಂದ್ರ ಎಂಬುವವರು ವಿದ್ಯುತ್​ ಕಾಯಿಲ್​ ಶಾಕ್​ನಿಂದ ಸ್ನಾನಗೃಹದಲ್ಲಿ ಸಾವಿಗೀಡಾಗಿರುವ ಘಟನೆ ಬಂಟ್ವಾಳದ ಬ್ರಹ್ಮರಕೊಟ್ಲು ಎಂಬಲ್ಲಿ ನಡೆದಿದೆ.

ಬಂಟ್ವಾಳ
ಬಂಟ್ವಾಳ

ಬಂಟ್ವಾಳ: ಸ್ನಾನಕ್ಕೆ ಬಿಸಿ ನೀರು ಕಾಯಿಸಲು ಉಪಯೋಗಿಸುವ ವಿದ್ಯುತ್ ಕಾಯಿಲ್​ ಮೂಲಕ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಸ್ನಾನಗೃಹದಲ್ಲಿಯೇ ಮೃತಪಟ್ಟ ಘಟನೆ ಬ್ರಹ್ಮರಕೊಟ್ಲು ಎಂಬಲ್ಲಿ ನಡೆದಿದೆ. ಮೂಲತಃ ನೀರುಮಾರ್ಗ ನಿವಾಸಿಯಾಗಿರುವ ಪ್ರಸ್ತುತ ಬ್ರಹ್ಮರಕೊಟ್ಲು ಕಳ್ಳಿಗೆ ಚಂದ್ರಿಗೆಯ ಪರಿಯೋಡಿ ಬೀಡು ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿರುವ ಹೇಮಚಂದ್ರ (49) ಮೃತಪಟ್ಟ ವ್ಯಕ್ತಿ.

ಹೇಮಚಂದ್ರ ಅವರ ಪತ್ನಿ ಮನೆ ಚಂದ್ರಿಗೆಯಲ್ಲಿದ್ದು, ಅಲ್ಲೇ ಸಮೀಪ ಪೆರಿಯೋಡಿಬೀಡು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರೂ ಮಂಗಳೂರಿಗೆ ಕೆಲಸಕ್ಕೆ ಹೋಗುತ್ತಿದ್ದರು. ಹೇಮಚಂದ್ರ ಅವರು ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದವರು ಸ್ನಾನಗೃಹಕ್ಕೆ ತೆರಳಿದ್ದಾರೆ. ಸುಮಾರು ಹೊತ್ತು ಕಳೆದರೂ ಪತಿ ಸ್ನಾನ ಮಾಡಿ ಹೊರಗೆ ಬಾರದೇ ಇರುವುದನ್ನು ಕಂಡು, ಪತ್ನಿ ಬಾಗಿಲು ತಟ್ಟಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದೇ ಇರುವಾಗ ಹೆದರಿಕೆಯಿಂದ ಬಾಗಿಲು ಮುರಿದು ನೋಡಿದಾಗ ಹೇಮಚಂದ್ರ ಅವರ ಕೈ ಬಕೆಟ್​ನಲ್ಲಿದ್ದು ಕೆಳಗೆ ಬಿದ್ದಿದ್ದರು.

ಇದನ್ನೂ ಓದಿ:ಮಂಗಳೂರಿನಲ್ಲಿ ಬಾಲಕಿ ಮೇಲೆ ಮಾನಭಂಗಕ್ಕೆ ಯತ್ನ.. ಪೋಕ್ಸೋ ಕಾಯ್ದೆಯಡಿ ಕೇಸ್​ ದಾಖಲು

ಮೇಲ್ನೋಟಕ್ಕೆ ಬಿಸಿನೀರು ಕಾಯಿಸುವ ವಿದ್ಯುತ್ ಕಾಯಿಲ್ ಮೂಲಕ ಶಾಕ್ ಹೊಡೆದು ಅವರು ಕೆಳಗೆ ಬಿದಿರುವಂತೆ ಕಂಡುಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅದಾಗಲೇ ಅವರು ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದರು. ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details