ಕರ್ನಾಟಕ

karnataka

By

Published : Jul 12, 2020, 11:27 PM IST

ETV Bharat / state

ಕೊರೊನಾ ಸೋಂಕಿನಿಂದ ಶಾಸಕ ಭರತ್ ಶೆಟ್ಟಿ ಗುಣಮುಖ

ಶಾಸಕ ಡಾ.ವೈ.ಭರತ್ ಶೆಟ್ಟಿ ಕೊರೊನಾ ಸೋಂಕಿನಿಂದ ಗುಣಮುಖ

ಮಂಗಳೂರು
ಮಂಗಳೂರು

ಮಂಗಳೂರು: ಕೊರೊನಾ ಸೋಂಕಿನಿಂದ ತಾವು ಗುಣಮುಖರಾಗಿರುವ ಬಗ್ಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಟ್ವೀಟ್ ಮೂಲಕ ಘೋಷಿಸಿದ್ದಾರೆ.

ಶಾಸಕ ಭರತ್ ಶೆಟ್ಟಿ ಟ್ವೀಟ್

ಸೋಂಕಿನಿಂದ ಗುಣಮುಖರಾಗಿರುವ ಬಗ್ಗೆ ಟ್ವೀಟ್ ಮೂಲಕ ತಿಳಿಸಿರುವ ಅವರು ದೇವರ, ಜನರ ಆಶೀರ್ವಾದದಿಂದ ಇದೀಗ ಗುಣಮುಖನಾಗಿರುವೆ. ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು ತುಂಬಾ ಚೆನ್ನಾಗಿ ನೋಡಿಕೊಂಡಿದ್ದು, 10ಕ್ಕೂ ಅಧಿಕ ದಿನಗಳ ಕಾಲ ತಾನು ಕ್ವಾರಂಟೈನ್‌ಗೆ ಒಳಗಾಗಿದ್ದೆ ಎಂದು ಹೇಳಿದ್ದಾರೆ.

ಎಲ್ಲರೂ ಮನೆಯಲ್ಲಿಯೇ ಇದ್ದು ಆರೋಗ್ಯವಾಗಿರಿ. ಅದೇ ರೀತಿ ಎಲ್ಲರೂ ಒಂದಾಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡೋಣ ಎಂದಿರುವ ಅವರು ಆದಷ್ಟು ಬೇಗ ಕ್ಷೇತ್ರದ ಅಭಿವೃದ್ಧಿ ಕೆಲಸದಲ್ಲಿ ತೊಡಗುವೆ ಎಂದಿದ್ದಾರೆ.

ABOUT THE AUTHOR

...view details