ಕರ್ನಾಟಕ

karnataka

ETV Bharat / state

ತಾರಸಿ ತುಂಬೆಲ್ಲಾ ತಾವರೆಯ ಕಲರವ : ಇದು ಮಂಗಳೂರು ಉಪನ್ಯಾಸಕಿಯ ವಿಶಿಷ್ಟ ಹವ್ಯಾಸ

ಕೆಸರಿನಲ್ಲಿ ಬೆಳೆಯುವ ತಾವರೆಗಳನ್ನು ಮನೆಯಲ್ಲಿ ಬೆಳೆಸುವ ಪ್ರಯೋಗಕ್ಕೆ ಕೈ ಹಾಕಿ ಇವರು ಯಶಸ್ವಿಯಾಗಿದ್ದಾರೆ. ತಾವರೆ ಹೂಗಳು ಫೆಬ್ರವರಿಯಿಂದ ಆಗಸ್ಟ್​​ವರೆಗೆ ಮಾತ್ರ ಹೂ ಬಿಡುತ್ತವೆ. ಉಳಿದ ಅವಧಿಯಲ್ಲಿ ತಾವರೆ ಗಿಡಗಳಿಗೆ ವಿಶ್ರಾಂತ ಸಮಯ. ಸುಮಾರು 8 ವರ್ಷಗಳಿಂದ ತಾವರೆ ಸೇರಿದಂತೆ ವಿವಿಧ ಹೂಗಳ ತೋಟ ಮಾಡಿ ಸ್ನೇಹಾ ಯಶಸ್ವಿಯಾಗಿದ್ದಾರೆ..

By

Published : Oct 20, 2021, 7:39 PM IST

Updated : Oct 20, 2021, 9:11 PM IST

lotus plantation in terrace by mangalore resident sneha bhat
ಜಲಸಸ್ಯಗಳನ್ನು ಮಹಡಿ ಮೇಲೆ ಬೆಳೆದ ಮಂಗಳೂರಿನ ಸ್ನೇಹಾ ಭಟ್

ಮಂಗಳೂರು; ತಾವರೆ ಬೆಳೆಯುವುದು ಕೆಸರಿನಲ್ಲಿ. ಆದರೆ, ಹಳ್ಳದಲ್ಲಿ ಕಾಣಸಿಗುವ ಈ ತಾವರೆಗಳನ್ನು ತಾರಸಿಯಲ್ಲಿ ಬೆಳೆಯುವ ಪ್ರಯೋಗ ಮಾಡಿ ಮಂಗಳೂರಿನ ಉಪನ್ಯಾಸಕಿಯೊಬ್ಬರು ಯಶಸ್ವಿಯಾಗಿದ್ದಾರೆ. ಇವರ ತಾರಸಿಯಲ್ಲಿ ತಾವರೆ ಸೇರಿ ವಿವಿಧ ಬಗೆಯ ಜಲ ಸಸ್ಯಗಳು ಗಮನ ಸೆಳೆಯುತ್ತಿವೆ.

ತಾರಸಿಯಲ್ಲಿ ತಾವರೆ ಹೂ ಅರಳಿಸಿದ ಸ್ನೇಹಾ ಭಟ್​

ಮಂಗಳೂರಿನ ಹೊರ ವಲಯದಲ್ಲಿರುವ ಈ ಮನೆಯ ತಾರಸಿಗೆ ಹೋದರೆ ಮನಮೋಹಕ ಹೂಗಳ ತೋಟ ಗಮನ ಸೆಳೆಯುತ್ತವೆ. ಸ್ನೇಹಾ ಭಟ್ ಎಂಬುವರು ತಾರಸಿಯನ್ನ ಹೂ ತೋಟವನ್ನಾಗಿ ಮಾಡಿದ್ದಾರೆ. ಮಂಗಳೂರಿನ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಮತ್ತು ಆಕಾಶವಾಣಿ ಉದ್ಘೋಷಕಿಯಾಗಿರುವ ಸ್ನೇಹಾ ಭಟ್ ಅವರು, ತಮ್ಮ ಮನೆಯಲ್ಲಿ ತಾವರೆ ಹೂಗಳನ್ನು ಅರಳಿಸಿದ್ದಾರೆ. ಇಲ್ಲಿ ಪ್ಲಾಸ್ಟಿಕ್ ಟಬ್​​ಗಳಲ್ಲಿ 85ಕ್ಕೂ ಅಧಿಕ ತಾವರೆಗಳನ್ನು ಬೆಳೆಸಿದ್ದಾರೆ. ಇಲ್ಲಿ ಇರುವ 150 ಪ್ಲಾಸ್ಟಿಕ್ ಟಬ್​ಗಳಲ್ಲಿ 88 ಬಗೆಯ ಹೂ ಗಿಡಗಳು ಕಂಗೊಳಿಸುತ್ತಿವೆ.

ಕೆಸರಿನಲ್ಲಿ ಬೆಳೆಯುವ ತಾವರೆಗಳನ್ನು ಮನೆಯಲ್ಲಿ ಬೆಳೆಸುವ ಪ್ರಯೋಗಕ್ಕೆ ಕೈ ಹಾಕಿ ಇವರು ಯಶಸ್ವಿಯಾಗಿದ್ದಾರೆ. ತಾವರೆ ಹೂಗಳು ಫೆಬ್ರವರಿಯಿಂದ ಆಗಸ್ಟ್​​ವರೆಗೆ ಮಾತ್ರ ಹೂ ಬಿಡುತ್ತವೆ. ಉಳಿದ ಅವಧಿಯಲ್ಲಿ ತಾವರೆ ಗಿಡಗಳಿಗೆ ವಿಶ್ರಾಂತ ಸಮಯ. ಸುಮಾರು 8 ವರ್ಷಗಳಿಂದ ತಾವರೆ ಸೇರಿದಂತೆ ವಿವಿಧ ಹೂಗಳ ತೋಟ ಮಾಡಿ ಸ್ನೇಹಾ ಯಶಸ್ವಿಯಾಗಿದ್ದಾರೆ.

ಜಲಸಸ್ಯಗಳನ್ನು ಮಹಡಿ ಮೇಲೆ ಬೆಳೆದ ಮಂಗಳೂರಿನ ಸ್ನೇಹಾ ಭಟ್

ತಾವರೆ ಗಿಡದ ಪ್ರತಿಯೊಂದು ಭಾಗಕ್ಕೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದೆ. ಆದರೆ, ತಮ್ಮ ಹವ್ಯಾಸವಾಗಿ ಮಾಡಿರುವ‌ ಈ ತೋಟದಿಂದ ಸ್ನೇಹಾ ಭಟ್ ಯಾವುದೇ ವಾಣಿಜ್ಯ ವ್ಯವಹಾರ ಮಾಡುತ್ತಿಲ್ಲ. ಈ ರೀತಿಯ ಪ್ರಯೋಗವನ್ನು ಮನೆಯಲ್ಲಿ ಮಹಿಳೆಯರು, ಕೆಲಸ ಕಳೆದುಕೊಂಡವರು ಮಾಡಿದರೆ ಉತ್ತಮ ಆದಾಯ ಗಳಿಸಲು ಸಾಧ್ಯ ಎನ್ನುತ್ತಾರೆ ಸ್ನೇಹಾ ಭಟ್.

Last Updated : Oct 20, 2021, 9:11 PM IST

ABOUT THE AUTHOR

...view details