ಕರ್ನಾಟಕ

karnataka

By

Published : Jul 26, 2019, 11:50 PM IST

ETV Bharat / state

ಮೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ: ಸೂಕ್ತ ಕ್ರಮಕ್ಕೆ ಮನವಿ

ವಿದ್ಯುತ್ ಬಿಲ್ ಕಟ್ಟಿರದ ಪರಿಣಾಮ ಮನೆಯೊಂದರ ಫ್ಯೂಸ್ ತೆಗೆದ ಹಿನ್ನೆಲೆಯಲ್ಲಿ ಮೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆಗೈದಿರುವ ಘಟನೆ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ: ಸೂಕ್ತ ಕ್ರಮಕೈಗೊಳ್ಳಲು ಕಂಕನಾಡಿ ಪೊಲೀಸ್ ಠಾಣಾ ಅಧಿಕಾರಿಗೆ ಮನವಿ

ಮಂಗಳೂರು: ವಿದ್ಯುತ್ ಬಿಲ್ ಕಟ್ಟದಿರುವುದರಿಂದ ಮನೆಯೊಂದರ ಫ್ಯೂಸ್ ತೆಗೆದ ಹಿನ್ನೆಲೆಯಲ್ಲಿ ಮೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆಗೈದಿರುದನ್ನು ಖಂಡಿಸಿ, ಸೂಕ್ತ ಕ್ರಮ ಕೈಗೊಳ್ಳಲು ಮೆಸ್ಕಾಂ ಅಧಿಕಾರಿಗಳು ಹಾಗೂ ನೌಕರರು ಇಂದು ಬೆಳಗ್ಗೆ ಕಂಕನಾಡಿ ಪೊಲೀಸ್ ಇಸ್ಸ್​ಸ್ಪೆಕ್ಟರ್​ಗೆ ಮನವಿ ಸಲ್ಲಿಸಿದರು.

ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ: ಸೂಕ್ತ ಕ್ರಮಕೈಗೊಳ್ಳಲು ಕಂಕನಾಡಿ ಪೊಲೀಸ್ ಠಾಣಾ ಅಧಿಕಾರಿಗೆ ಮನವಿ

ಹಲ್ಲೆಗೊಳಗಾದ ಮೆಸ್ಕಾಂ ಸಿಬ್ಬಂದಿ ಬಸವರಾಜ್ ಮಾತನಾಡಿ, ಮಂಗಳೂರು ನಗರದ ನಾಗುರಿಯ ಮನೆಯೊಂದರ ಮೂರು ತಿಂಗಳ ವಿದ್ಯುತ್ ಬಿಲ್ 9,500 ಸಾವಿರ ರೂ. ಬಾಕಿಯಿತ್ತು. ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಆದೇಶದಂತೆ ನಾನು ಆ ಮನೆಗೆ ತೆರಳಿ ಫ್ಯೂಸ್ ತೆಗೆದು ತಂದಿದ್ದೆ. ಬಳಿಕ ಮನೆಯವರು ವಿದ್ಯುತ್ ಬಿಲ್ ಪಾವತಿಸಿದ ಹಿನ್ನೆಲೆಯಲ್ಲಿ ಸಂಜೆ ಮತ್ತೆ ಫ್ಯೂಸ್ ಹಾಕಲು ತೆರಳಿದ್ದೆ. ಈ ಸಂದರ್ಭ ಆ ಮನೆಯವರೇ ಆದ ಇಬ್ಬರು ಕಾರ್​ನಲ್ಲಿ ಬಂದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೈದಿದ್ದಾರೆ. ಅಲ್ಲದೆ ಆ ಮನೆಯೊಡತಿಯ ಕಾಲು ಹಿಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂದರ್ಭ ಮೆಸ್ಕಾಂ ಅಧಿಕಾರಿ ಗುರುಮೂರ್ತಿ ಮಾತನಾಡಿ, ನಾವು ಕೆಲಸ ಮಾಡುವಾಗ ನಮಗೆ ಕೆಲವೊಂದು ಮಂದಿಯಿಂದ ಈ ರೀತಿಯ ತೊಂದರೆಗಳಾಗುತ್ತಿವೆ. ನಾವು ಬಳಕೆದಾರರಿಗೆ ಯಾವತ್ತೂ ಅಡ್ಡಿಪಡಿಸದೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇವೆ. ನಿನ್ನೆ ನಮ್ಮ ಸಿಬ್ಬಂದಿಗೆ ಹಲ್ಲೆಗೈದಿದ್ದು, ಇದರ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ. ಇಂತಹ ಘಟನೆಗಳು ಸಂಭವಿಸಿದಲ್ಲಿ ನಮಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಾವು ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿದ್ದೇವೆ. ಪೊಲೀಸ್ ಅಧಿಕಾರಿಗಳು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ನೂರಾರು ಮೆಸ್ಕಾಂ ಸಿಬ್ಬಂದಿಯು ಠಾಣೆಯ ಮುಂಭಾಗ ಜಮಾಯಿಸಿದ್ದರು.

For All Latest Updates

TAGGED:

ABOUT THE AUTHOR

...view details