ಚಿತ್ರದುರ್ಗ:ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಪಂಚಮಸಾಲಿ ಪೀಠದ ಶ್ರೀಗಳ ನೇತೃತ್ವದ ಪಾದಯಾತ್ರೆಗೆ ಆಗ್ರಹಿಸಿ ಸ್ಥಳಕ್ಕೆ ಇಂದು ಸಚಿವ ಸಿಸಿ ಪಾಟೀಲ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ.
ನಗರದದ ಬುರುಜನರೊಪ್ಪ ಗ್ರಾಮದಿಂದ ಹಿರಿಯೂರಿನತ್ತ ಪಾದಯಾತ್ರೆಗೆ ತೆರಳಿದ್ದು, ಶ್ರೀಗಳ ಭೇಟಿಗೆ ಸಚಿವ ಸಿಸಿ ಪಾಟೀಲ ಅವರ ಜೊತೆಗೆ ಸಚಿವ ಮುರಗೇಶ್ ನಿರಾಣಿ ಕೂಡ ಬರುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಸರ್ಕಾರದ ನಿಯೋಗದಿಂದ ಬಿಜೆಪಿ ನಾಯಕ ಇಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಹಾಗೂ ಹರಿಹರದ ಪೀಠದ ವಚನಾನಂದ ಶ್ರೀಗಳ ಭೇಟಿಗೆ ಪಂಚಮಸಾಲಿ ಸಮುದಾಯದ ನಾಯಕರು ಹಾಗೂ ಬಿಜೆಪಿ ನಾಯಕರು ಇಂದು ಪಾದಯಾತ್ರೆ ಸ್ಥಳಕ್ಕೆ ಭೇಟಿ ನೀಡಿ, ಬಳಿಕ ಮೀಸಲಾತಿ ಹೋರಾಟದ ಪಾದಯಾತ್ರೆ ನಿಲ್ಲಿಸುವಂತೆ ಮನವೊಲಿಸುವ ಯತ್ನದಲ್ಲಿದ್ದಾರೆ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಆದರೆ, ಸಚಿವರುಗಳ ಜೊತೆಗೆ ಇತರ ಪಂಚಮಸಾಲಿ ಸಮುದಾಯದ ಮುಖಂಡರು ಬಂದು ಸಾಥ್ ನೀಡುತ್ತಾರೆ.
ಇನ್ನು ಪಾದಯಾತ್ರೆ ಕೈ ಬಿಡುವಂತೆ ಮನವೊಲಿಸಲು ಸಚಿವರು ಬರುತ್ತಿದ್ದಾರೋ ಅಥವಾ ಸಿಎಂ ಬಿಎಸ್ವೈ ಯಾವುದಾದರೂ ಸಂದೇಶ ಹೇಳಿ ಕಳುಹಿಸಿಕೊಡುತ್ತಿದ್ದಾರೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.