ಕರ್ನಾಟಕ

karnataka

ಗಣೇಶನ ವಿಸರ್ಜನೆ ಬ್ಯಾನರ್ ವಿಚಾರಕ್ಕೆ ಗಲಾಟೆ: ಚಾಕು ಇರಿತದಿಂದ ಯುವಕ ಸಾವು

ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ ಯುವಕನಿಗೆ ಚಾಕು ಇರಿದಿರುವ ಘಟನೆ ಚಿತ್ರದುರ್ಗ  ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

By

Published : Sep 15, 2019, 3:55 AM IST

Published : Sep 15, 2019, 3:55 AM IST

Updated : Sep 15, 2019, 5:49 AM IST

ಅಂಜನಮೂರ್ತಿ, ಮೃತಪಟ್ಟ ಯುವಕ

ಚಿತ್ರದುರ್ಗ: ಗಣೇಶನ ವಿಸರ್ಜನೆಗೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ ಚಾಕು ಇರಿತದಿಂದ ಯುವಕನಿಗೆ ಮೃತಪಟ್ಟ ಘಟನೆ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

ಗಣೇಶನ ವಿಸರ್ಜನೆಗೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಚಾಕು ಇರಿತದಿಂದ ಗಾಯಗೊಂಡಿದ್ದ ಯುವಕ ಸಾವನಪ್ಪಿದ್ದಾನೆ. ಅಂಜನಮೂರ್ತಿ (20) ಮೃತಪಟ್ಟ ಯುವಕ. ಗಣೇಶ್ ಎಂಬ ಯುವಕ ಚಾಕುವಿನಿಂದ ಇರಿದಿದ್ದು, ಗಾಯಾಳು ಅಂಜನಮೂರ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಗಣೇಶ್ ಆರೋಪಿ

ಇನ್ನು ರವಿಚಂದ್ರ ಎಂಬಾತ ಚಾಕು ಇರಿತಕ್ಕೆ ಕುಮ್ಮಕ್ಕು ನೀಡಿದ್ದಾನೆ ಎಂದು ಮೃತ ಅಂಜನಮೂರ್ತಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ‌. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಹೊಳಲ್ಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ‌.

Last Updated : Sep 15, 2019, 5:49 AM IST

ABOUT THE AUTHOR

...view details