ಕರ್ನಾಟಕ

karnataka

ಜಾತಿ ಗಣತಿ ವರದಿಯನ್ನು ಸಿದ್ದರಾಮಯ್ಯ ಸರ್ಕಾರವೇ ಕಸದ ಬುಟ್ಟಿಯ ಕೆಳಗಿಟ್ಟಿತ್ತು: ಸಿ.ಟಿ. ರವಿ

By

Published : Oct 2, 2019, 2:56 PM IST

ಜಾತಿ ಗಣತಿ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಿ ಟಿ ರವಿ ಪ್ರತಿಕ್ರಿಯಿಸಿ, ಈ ಹಿಂದೆ ಇದ್ದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸಚಿವ ಸಿ.ಟಿ.ರವಿ

ಚಿಕ್ಕಮಗಳೂರು:ಜಾತಿ ಗಣತಿ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಸಿ ಟಿ ರವಿ ಅವರು, ಅಂದಿನ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಂದಿನ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಾತಿ ಗಣತಿ ವರದಿ‌ ಸರ್ಕಾರಕ್ಕೆ ಸಲ್ಲಿಕೆ ಕುರಿತು ಮಾತನಾಡಿದ ಅವರು, ಆ ವರದಿಯನ್ನು ಆ‌ ಸಿದ್ದರಾಮಯ್ಯನವರ ಸರ್ಕಾರವೇ ಮಂಡನೆ ಮಾಡಲಿಲ್ಲ. ಕೋಟ್ಯಂತರ ರೂಪಾಯಿ‌ ಖರ್ಚು ಮಾಡಿ ತಯಾರಿಸಿದ್ದ ವರದಿ ಅದಾಗಿದ್ದು, ಮೂರು ವರ್ಷ ಆ ವರದಿ ಎಲ್ಲಿತ್ತು ಅಂತ ಕೇಳಬೇಕು. ಮೂರು ವರ್ಷ ಆ ವರದಿಯನ್ನು ಕಸದ ಬುಟ್ಟಿ ಕೆಳಗಿಟ್ಟಿದ್ದರು. ಅವರೇ ತಯಾರಿಸಿದ ವರದಿ ಮೇಲೆ ಅವರಿಗೇ ವಿಶ್ವಾಸವಿರಲಿಲ್ಲ. ಇನ್ನೊಂದು ಸರ್ಕಾರದ ಬಗ್ಗೆ‌ ನಿರೀಕ್ಷೆ ಮಾಡೋದು ಹೇಗೆ‌ ಸಾಧ್ಯವೆಂದು ಪ್ರಶ್ನಿಸಿದರು.

ABOUT THE AUTHOR

...view details