ಕರ್ನಾಟಕ

karnataka

By

Published : Sep 5, 2019, 2:23 PM IST

Updated : Sep 5, 2019, 3:23 PM IST

ETV Bharat / state

ಖಾಸಗಿ-ಕೆಎಸ್​ಆರ್​ಟಿಸಿ ಬಸ್​​ ನಡುವೆ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು 30 ಜನರಿಗೆ ಗಾಯ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಹಾಗೂ ತರೀಕೆರೆ ಮಧ್ಯೆ ಬರುವ ರಾಷ್ಟ್ರೀಯ ಹೆದ್ದಾರಿ ಕೂಡ್ಲುರೂ ಗೇಟ್ ಬಳಿ ಸರ್ಕಾರಿ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಕೆಎಸ್​ಆರ್​ಟಿಸಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಖಾಸಗಿ - ಕೆಎಸ್​ಆರ್​ಟಿಸಿ ಬಸ್​​ ನಡುವೆ ಡಿಕ್ಕಿ

ಚಿಕ್ಕಮಗಳೂರು :ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕೆಎಸ್​​ಆರ್​ಟಿಸಿ ಬಸ್​​ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಖಾಸಗಿ - ಕೆಎಸ್​ಆರ್​ಟಿಸಿ ಬಸ್​​ ನಡುವೆ ಡಿಕ್ಕಿ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಹಾಗೂ ತರೀಕೆರೆ ಮಧ್ಯೆ ಬರುವ ರಾಷ್ಟ್ರೀಯ ಹೆದ್ದಾರಿ ಕೂಡ್ಲುರೂ ಗೇಟ್ ಬಳಿ ಈ ಅಪಘಾತವಾಗಿದೆ. ಘಟನೆಯಲ್ಲಿ 30 ಮಂದಿಗೆ ಗಾಯಗಳಾಗಿದ್ದು ಸಾರಿಗೆ ಬಸ್ ಚಾಲಕ ಪುಟ್ಟಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಗಂಭೀರ ಗಾಯವಾದ 20 ಮಂದಿಯನ್ನು ಶಿವಮೊಗ್ಗ ಅಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನುಳಿದವರಿಗೆ ಬೀರೂರು ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರಿನಿಂದ ಹೊಸಪೇಟೆಗೆ ಹೋಗುತ್ತಿದ್ದ ಸಾರಿಗೆ ಬಸ್ ತರೀಕೆರೆಯಿಂದ ಬೀರೂರಿಗೆ ಅಗಮಿಸುತ್ತಿದ್ದ ವೇಳೆ ಅಪಘಾತವಾಗಿದೆ. ಬೀರೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Sep 5, 2019, 3:23 PM IST

ABOUT THE AUTHOR

...view details