ಚಿಕ್ಕಮಗಳೂರು:ನಾವು ಶ್ರೀರಾಮಚಂದ್ರನ ಮೊಮ್ಮಕ್ಕಳು ಎಂದು ಹೇಳಿಕೊಳ್ಳಲು ಬಿಜೆಪಿ ಅವರಿಗೆ ನಾಚಿಕೆ ಆಗಲ್ವಾ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮೊದಲ ಬಾರಿ ಗೆದ್ದಾಗ 3 ಮುಖ್ಯಮಂತ್ರಿ, 3 ಪಕ್ಷಗಳಾಗಿ ವಿಭಜನೆಯಾಯ್ತು. ಈ ಮುಖ್ಯಮಂತ್ರಿಯೂ ಬದಲಾಗ್ತಾರೆ ಅನ್ನೋ ಮುನ್ಸೂಚನೆಯನ್ನ ಈಶ್ವರಪ್ಪ ಹೇಳಿದ್ದಾರೆ. ಇದು ಈಶ್ವರಪ್ಪ ಬಾಯಲ್ಲಿ ಬಂದ ಮಾತಲ್ಲ, ವರಿಷ್ಠರ ಬಾಯಿಂದ ಬಂದಿರೋ ಮಾತು.