ಕರ್ನಾಟಕ

karnataka

By

Published : Feb 18, 2020, 4:01 AM IST

ETV Bharat / state

ಎಂಟು ದರೋಡೆಕೋರರ ಬಂಧನ... 2 ಕಾರು, 1.11 ಲಕ್ಷ ನಗದು ಪೊಲೀಸ್​ ವಶಕ್ಕೆ

ಚಿಕ್ಕಬಳ್ಳಾಪುರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರ ಹಾರೋಬಂಡೆ ಸಮೀಪ ಕಳೆದ ತಿಂಗಳ 26 ರಂದು ಬೆಂಗಳೂರಿನ ಶಿವಜಿನಗರದ ದನಗಳ ವ್ಯಾಪಾರಿಗಳು ತೆರಳುತ್ತಿದ್ದ ವೇಳೆ ಕಾರನ್ನು ಮಧ್ಯರಾತ್ರಿ ಅಡ್ಡಗಟ್ಟಿ ಚಾಕು ತೋರಿಸಿ 3 ಲಕ್ಷ ಹಣ ದೋಚಿ ಪರಾರಿಯಾಗಿದ್ದ ಗ್ಯಾಂಗ್​ ಅನ್ನು ಪೊಲೀಸರು ಬಂಧಿಸಿದ್ದಾರೆ.

thieves-arrested-in-chikkaballapur
ದರೋಡೆ ಮಾಡುತ್ತಿದ್ದ ಗ್ಯಾಂಗ್ ಅಂದರ್..!

ಚಿಕ್ಕಬಳ್ಳಾಪುರ: ದನಗಳ ಖರೀದಿಗೆ ಕಾರಿನಲ್ಲಿ ತೆರಳುತ್ತಿದ್ದ ಬೆಂಗಳೂರು ವ್ಯಾಪಾರಿಗಳನ್ನು ಅಡ್ಡಗಟ್ಟಿ ಲಕ್ಷಾಂತರ ರೂಪಾಯಿ ಮೌಲ್ಯದ ಹಣ ದೋಚಿ‌ ಪರಾರಿಯಾಗಿದ್ದ 8 ಮಂದಿ ಆರೋಪಿಗಳನ್ನು ಇಲ್ಲಿನ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರ ಹಾರೋಬಂಡೆ ಸಮೀಪ ಕಳೆದ ತಿಂಗಳ 26ರಂದು ಬೆಂಗಳೂರಿನ ಶಿವಜಿನಗರದ ದನಗಳ ವ್ಯಾಪಾರಿಗಳು ತೆರಳುತ್ತಿದ್ದ ವೇಳೆ ಆರೋಪಿಗಳು ಕಾರನ್ನು ಮಧ್ಯರಾತ್ರಿ ಅಡ್ಡಗಟ್ಟಿ ಚಾಕು ತೋರಿಸಿ 3 ಲಕ್ಷ ರೂ. ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತ ಆರೋಪಿಗಳನ್ನು ಜಿಯಾವುಲ್ಲಾ ಖಾನ್, ಯಾರಬ್ ಬೇಗ್, ಸೈಯದ್ ಪರೀಜ್, ಸಹೀಪ್ ಬೇಗ್, ನವಾಜ್ ಬೇಗ್, ಮಹಮದ್ ಶಾರೂಖ್, ಸುಹೇಲ್ ಪಾಷ ಹಾಗೂ ನದೀಮ್ ಪಾಷ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಎರಡು ಕಾರು, ಒಂದು ಬೈಕ್, ಮೂರು ಮೊಬೈಲ್, ಸೇರಿದಂತೆ 1.11 ಲಕ್ಷ ರೂ. ನಗದು ವಶಪಡಿಸಿಕೊಳ್ಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details