ಕರ್ನಾಟಕ

karnataka

By

Published : Oct 19, 2019, 1:54 PM IST

ETV Bharat / state

ಕಟ್ಟಡದ ಉದ್ಘಾಟನೆಗೆ ಬಂದ ಸಚಿವರನ್ನು ತಡೆದ ಗ್ರಾಮಸ್ಥರು,ಕಾರಣ?

ಕಟ್ಟಡದ ಉದ್ಘಾಟನೆಗೆಂದು ಬಂದ ಅಬಕಾರಿ ಸಚಿವರಿಗೆ ಗ್ರಾಮಸ್ಥರು ತಡೆದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಬಳಿ ನಡೆದಿದೆ.

ಐಟಿಐ ಕಾಲೇಜು ಕಟ್ಟಡದ ಉದ್ಘಾಟನೆ

ಚಿಕ್ಕಬಳ್ಳಾಪುರ: ಕಟ್ಟಡದ ಉದ್ಘಾಟನೆಗೆಂದು ಬಂದ ಅಬಕಾರಿ ಸಚಿವರಿಗೆ ಗ್ರಾಮಸ್ಥರು ತಡೆಯೊಡ್ಡಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಬಳಿ ನಡೆದಿದೆ.

ಐಟಿಐ ಕಾಲೇಜು ಕಟ್ಟಡದ ಉದ್ಘಾಟನೆ

ತಾಲೂಕಿನ ಮಂಡಿಕಲ್ ಬಳಿ ಐಟಿಐ ಕಾಲೇಜು ಕಟ್ಟಡದ ಉದ್ಘಾಟನೆಗೆ ಅಬಕಾರಿ ಸಚಿವ ನಾಗೇಶ್ ಹಾಜರಾಗಿದ್ದು, ಎಲ್ಲಾ ತಯಾರಿ ನಡೆಸಿಕೊಂಡಿದ್ದರು. ಆದರೆ ಸ್ಥಳೀಯ ಅನರ್ಹ ಶಾಸಕ ಸುಧಾಕರ್​ಗೆ ಆಹ್ವಾನ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಕೆಲ ಕಾಲ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು.

ಮಂಡಿಕಲ್ಲು ಗ್ರಾಮದಲ್ಲಿನ ಐಟಿಐ ಕಾಲೇಜು ಉದ್ಘಾಟನೆಗೆ ಸ್ಥಳೀಯ ಗ್ರಾ.ಪಂ ಸದಸ್ಯ ಹಾಗೂ ಆನರ್ಹ ಶಾಸಕರಿಗೆ ಆಹ್ವಾನ ಇಲ್ಲದ ಕಾರಣ ಸುಧಾಕರ್ ಬೆಂಬಲಿಗರು ಗುತ್ತಿಗೆದಾರ ಹಾಗೂ ಕಾಲೇಜು ಪ್ರಾಂಶುಪಾಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾರ್ಯಕ್ರಮಕ್ಕೆ ಅನರ್ಹ ಶಾಸಕ ಸುಧಾಕರ್ ಹಾಗೂ ಸಚಿವರು ಬಂದ ನಂತರವೇ ಬೆಂಬಲಿಗರು ಶಾಂತಗೊಂಡು ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು. ನಂತರ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ABOUT THE AUTHOR

...view details