ಕರ್ನಾಟಕ

karnataka

Watch: ಪೆಟ್ರೋಲ್​ ಬಂಕ್​ನಲ್ಲಿ ಯುವಕನ​ ಮೇಲೆ ಮೂವರು ಪುಂಡರಿಂದ ಹಲ್ಲೆ!

By

Published : Jul 1, 2021, 11:20 AM IST

Updated : Jul 1, 2021, 11:40 AM IST

ಪೆಟ್ರೋಲ್ ಬಂಕ್​ನಲ್ಲಿ ಪುಂಡರ ದಾಂಧಲೆ ನಡೆಸಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.

Miscreants attack on petrol pump boy, Miscreants attack on petrol pump boy in Chamarajanagar, Chamarajanagar news, Chamarajanagar crime news, ಪೆಟ್ರೋಲ್​ ಬಂಕ್​ ಬಾಯ್​ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಚಾಮರಾಜನಗರದಲ್ಲಿ ಪೆಟ್ರೋಲ್​ ಬಂಕ್​ ಬಾಯ್​ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಚಾಮರಾಜನಗರ ಸುದ್ದಿ, ಚಾಮರಾಜನಗರ ಅಪರಾಧ ಸುದ್ದಿ,
ಪೆಟ್ರೋಲ್​ ಬಂಕ್​ ಬಾಯ್​ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಚಾಮರಾಜನಗರ:ಪೆಟ್ರೋಲ್ ಹಾಕಿಸಿಕೊಳ್ಳುವ ವಿಚಾರಕ್ಕೆ ಕ್ಯಾತೆ ತೆಗೆದು ಯುವಕನ ಮೇಲೆ ಪುಂಡರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಗುಂಡ್ಲುಪೇಟೆಯ ಧಾನ್ಯಲಕ್ಷ್ಮಿ ಪೆಟ್ರೋಲ್ ಬಂಕ್​ನಲ್ಲಿ ನಡೆದಿದೆ.

ಪೆಟ್ರೋಲ್​ ಬಂಕ್​ ಬಾಯ್​ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದ ಗುಂಡ್ಲುಪೇಟೆಯ ಸಂಜು, ವೇಣು ಸೇರಿದಂತೆ ಮೂವರು ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದ ಖಲೀಂ ಎಂಬಾತನ ಮೇಲೆ ಕ್ಯಾತೆ ತೆಗೆದಿದ್ದಾರೆ. ಬಳಿಕ ಖಲೀಂನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಖಲೀಂನ ಬೈಕ್ ಬೀಳಿಸಿ ತಲೆ, ಹೊಟ್ಟೆ ಭಾಗಕ್ಕೆ ಒದ್ದು ಕ್ರೌರ್ಯ ಮೆರೆದಿರುವ ದೃಶ್ಯವೆಲ್ಲವೂ ಪೆಟ್ರೋಲ್​ ಬಂಕ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗಿದ್ದು, ಸದ್ಯ ಈ ಘಟನೆ ಕುರಿತು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Last Updated : Jul 1, 2021, 11:40 AM IST

ABOUT THE AUTHOR

...view details