ಕರ್ನಾಟಕ

karnataka

ETV Bharat / state

ಚಾಮರಾಜನಗರ: ಹೊತ್ತಿ ಉರಿದ ಮದ್ಯದಗಂಡಿ... ಲಕ್ಷಾಂತರ ಮೌಲ್ಯದ ಮಾಲು ಭಸ್ಮ

ಎಂಎಸ್ಐಎಲ್ ಶಾಪ್​​ನಲ್ಲಿ ದಿಢೀರ್​ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲೇ ಲಕ್ಷಾಂತರ ರೂ. ಮೌಲ್ಯದ ಮದ್ಯ ಸುಟ್ಟು ಭಸ್ಮವಾಗಿದೆ.

By

Published : Aug 27, 2020, 10:42 AM IST

ಧಗಧಗಿಸಿದ ಮದ್ಯದಗಂಡಿ, ಲಕ್ಷಾಂತರ ಮೌಲ್ಯದ ಮಾಲು ಭಸ್ಮ
ಧಗಧಗಿಸಿದ ಮದ್ಯದಗಂಡಿ, ಲಕ್ಷಾಂತರ ಮೌಲ್ಯದ ಮಾಲು ಭಸ್ಮ

ಚಾಮರಾಜನಗರ: ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮದ್ಯದಂಗಡಿ ಹೊತ್ತಿ ಉರಿದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ನಡೆದಿದೆ.

ಧಗಧಗಿಸಿದ ಮದ್ಯದಗಂಡಿ

ರಾಜಕಾರಣಿ ಶಿವಬಸಪ್ಪ ಅವರಿಗೆ ಸೇರಿದ ಎಂಎಸ್ಐಎಲ್ ಶಾಪ್​​ನಲ್ಲಿ ದಿಢೀರ್​ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲೇ ಲಕ್ಷಾಂತರ ರೂ. ಮೌಲ್ಯದ ಮದ್ಯದ ಸ್ಯಾಷೆಗಳು, ಬಾಟಲಿಗಳು ಭಸ್ಮವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.

ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತೆರಕಣಾಂಬಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details