ಕರ್ನಾಟಕ

karnataka

By

Published : Apr 23, 2020, 3:39 PM IST

ETV Bharat / state

ಸಂಕಷ್ಟದಲ್ಲಿರುವ ಬಡವರ ನೆರವಿಗೆ ನಿಂತ ಶಾಸಕ ಎನ್.ಮಹೇಶ್​ ಅಭಿಮಾನಿ ಬಳಗ

ಶಾಸಕ ಎನ್.ಮಹೇಶ್ ಅಭಿಮಾನಿ ಬಳಗದ ವತಿಯಿಂದ ಸುಮಾರು 10 ಸಾವಿರ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು.

Distribution of food items kit for poor families by N. Mahesh fan
ಸಂಕಷ್ಟದಲ್ಲಿರುವ ಬಡವರ ನೆರವಿಗೆ ನಿಂತ ಶಾಸಕ ಎನ್.ಮಹೇಶ್ ಬಳಗ

ಚಾಮರಾಜನಗರ:ಕೊಳ್ಳೇಗಾಲ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ನಿರ್ಗತಿಕರು, ಪೌರಕಾರ್ಮಿಕರು, ಚಾಲಕರು​, ಕಟ್ಟಡ ಕಾರ್ಮಿಕರಿಗೆ ಶಾಸಕ ಎನ್.ಮಹೇಶ್ ಅಭಿಮಾನಿ ಬಳಗದಿಂದ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು.

ಸಂಕಷ್ಟದಲ್ಲಿರುವ ಬಡವರ ನೆರವಿಗೆ ನಿಂತ ಶಾಸಕ ಎನ್.ಮಹೇಶ್ ಅಭಿಮಾನಿ ಬಳಗ

ದಿನಸಿ ವಿತರಸಿ ಮಾತನಾಡಿದ ಶಾಸಕ ಎನ್.ಮಹೇಶ್, ಶ್ರಮಿಕರಾದ ಕಾರ್ಮಿಕರ ವರ್ಗ ಈ ದೇಶದ ಸಂಪತ್ತು. ದೇಶದ ಸಂಪತ್ತನ್ನ ಅಭಿವೃದ್ಧಿಪಡಿಸುವ ವರ್ಗ ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿದೆ. ಆದ್ದರಿಂದ ನನ್ನ ಬೆಂಬಲಿಗರು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಡ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಸಹಾಯ ಮಾಡುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಎಷ್ಟು ಸಹಾಯ ಮಾಡಿದರೂ ಸಾಲದು. ಅನುಕೂಲವಿರುವ ಶ್ರೀಮಂತರು ತಮ್ಮ ಸುತ್ತಮುತ್ತ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿ ಮಾನವೀಯತೆ ತೋರಬೇಕು ಎಂದರು.

ABOUT THE AUTHOR

...view details