ಕರ್ನಾಟಕ

karnataka

By

Published : May 24, 2019, 9:39 PM IST

ETV Bharat / state

ರೆಡ್​​ ಸ್ಯಾಂಡಲ್​​ ಬೇರಿಗೆ‌ ಕೈ ಹಾಕಿದ ಸಿಸಿಬಿ: ಮುಂಬೈನಲ್ಲಿ 1 ಟನ್​ ರಕ್ತಚಂದನ ಜಪ್ತಿ

ಬೆಂಗಳೂರು ಮೂಲಕ ಮುಂಬೈಗೆ ಅಕ್ರಮವಾಗಿ ಸಾಗಾಟ ಮಾಡಿದ್ದ 1 ಟನ್ ರಕ್ತಚಂದನದ ತುಂಡುಗಳನ್ನು ಜಪ್ತಿ‌ ಮಾಡಿ ಸಿಸಿಬಿ ಪೊಲೀಸರು ಬೆಂಗಳೂರಿಗೆ ತರುತ್ತಿದ್ದಾರೆ.

ರೆಡ್ ಸ್ಯಾಂಡಲ್

ಬೆಂಗಳೂರು: ನಗರ ಹೊರವಲಯದ ಕಟ್ಟಿಗೇನಹಳ್ಳಿಯಲ್ಲಿ ಕಳೆದ ವಾರ ಅಕ್ರಮವಾಗಿ ಸರಬರಾಜು ಮಾಡುತ್ತಿದ್ದ ಮೂರು ಕೋಟಿ ರೂ. ಮೌಲ್ಯದ 4 ಸಾವಿರ ಕೆಜಿ ರಕ್ತಚಂದನ‌ (ರೆಡ್ ಸ್ಯಾಂಡಲ್) ಜಪ್ತಿ ಮಾಡಿಕೊಂಡಿದ್ದ ಸಿಸಿಬಿ ಪೊಲೀಸರು, ಇದೀಗ ಬೆಂಗಳೂರು ಮೂಲಕ ಮುಂಬೈಗೆ ಅಕ್ರಮವಾಗಿ ಸಾಗಾಟ ಮಾಡಿದ್ದ 1 ಟನ್ ರಕ್ತಚಂದನದ ತುಂಡುಗಳನ್ನು ಜಪ್ತಿ‌ ಮಾಡಿ ಬೆಂಗಳೂರಿಗೆ ತರುತ್ತಿದ್ದಾರೆ.

ಮೇ 17ರಂದು ಕಟ್ಟಿಗೆನಹಳ್ಳಿಯ ಹುಸ್ಕೂರು ಬಳಿಯ ಗೋದಾಮಿನಲ್ಲಿ ರೆಡ್ ಸ್ಯಾಂಡಲ್ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿ, ನಾಲ್ಕು ಟನ್ ರೆಡ್ ಸ್ಯಾಂಡಲ್‌ ಸೀಜ್ ಮಾಡಿತ್ತು. ಇದೀಗ ಇದರ ಜಾಡು ಹಿಡಿದು ಹೊರಟ‌ ಸಿಸಿಬಿ, ಪ್ರಕರಣದ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಬಾಬಾಖಾನ್ ಮೂಲಕ ಈ ಮಾಹಿತಿ ಕಲೆಹಾಕಿದ್ದರು.

ಅಲ್ಲದೇ ಸತತ 10 ವರ್ಷಗಳಿಂದ ಪೊಲೀಸರಿಗೆ ಕಣ್ತಪ್ಪಿಸಿ ಓಡಾಡುತ್ತಿದ್ದ ಸ್ಮಗ್ಲರ್ ಅಬ್ಧುಲ್ ರಶೀದ್, ಜುಬೇರ್ ಖಾನ್ ಸೇರಿದಂತೆ 13 ಮಂದಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

For All Latest Updates

TAGGED:

ABOUT THE AUTHOR

...view details