ಕರ್ನಾಟಕ

karnataka

ETV Bharat / state

ಗಂಡಸರು ಯಾರೆಂದು ಎಲೆಕ್ಷನ್‌ ಫಲಿತಾಂಶ ಬಳಿಕ ಗೊತ್ತಾಗಲಿದೆ : ಇಬ್ರಾಹಿಂಗೆ ಬಿಎಸ್​ವೈ ಟಾಂಗ್​

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಗಂಡಸರು ಯಾರು ಎಂಬುದು ಗೊತ್ತಾಗಲಿದೆ ಅಂತಾ ವಿಪಕ್ಷ ನಾಯಕ ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿಯಲ್ಲಿ ಗಂಡಸರೇ ಇಲ್ಲ ಎಂಬ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ.

By

Published : Apr 3, 2019, 5:42 PM IST

ಬಿಎಸ್​ವೈ ಟಾಂಗ್​

ಬೀದರ್:ಬಿಜೆಪಿಯಲ್ಲಿ ಗಂಡಸರೇ ಇಲ್ಲ ಎಂಬ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಅವರ ಹೇಳಿಕೆಗೆ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಗಂಡಸರು ಯಾರು ಎಂಬುದು ಗೊತ್ತಾಗಲಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ.

ನಗರದ ಗಣೇಶ ಮೈದಾನದಲ್ಲಿ ಆಯೋಜಿಸಿದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರ ಚುನಾವಣೆ ಪ್ರಚಾರ ಸಮಾವೇಶದ ಬಳಿಕ ಅವರು ಮಾತನಾಡಿದರು. ಕಲಬುರಗಿಯ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ಅವರು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಆಗ ಕಾಂಗ್ರೆಸ್ ನಾಯಕರಿಗೆ ಗಂಡಸರು ಯಾರು ಗೊತ್ತಾಗುತ್ತೆ ಎಂದು ಗುಡುಗಿದರು.

ಇಬ್ರಾಹಿಂ ಹೇಳಿಕೆಗೆ ಬಿಎಸ್​ವೈ ಟಾಂಗ್​

ಮಂಡ್ಯ ರಾಜಕಾರಣದಲ್ಲಿ ಸುಮಲತಾ ಹಾಗೂ ಅಂಬರೀಶ್​ ಅವರನ್ನು ಅವಮಾನಿಸುತ್ತಿರುವ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಜಾತಿ ರಾಜಕಾರಣ ಮಾತನಾಡಿ ಎಲ್ಲರನ್ನೂ ಅಪಮಾನ ಮಾಡ್ತಿದ್ದಾರೆ. ಇದರ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಮಂಡ್ಯದಲ್ಲಿ ಸುಮಲತಾ ಗೆದ್ದೇ ಗೆಲ್ಲುತ್ತಾರೆ ಎಂದು ಬಿಎಸ್‌ವೈ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details