ಕರ್ನಾಟಕ

karnataka

By

Published : Mar 24, 2020, 9:42 PM IST

ETV Bharat / state

ಬಸವಕಲ್ಯಾಣದಲ್ಲಿ ಹಂದಿಗಳ ಸರಣಿ ಸಾವು: ಜನರಲ್ಲಿ ಆತಂಕ

ರಾಜ್ಯದಲ್ಲಿ ಕೊರೊನಾ ಭೀತಿ ಇರುವಾಗಲೇ ಬಸವಕಲ್ಯಾಣ ನಗರ ನಿವಾಸಿಗಳಿಗೆ ಹಂದಿ ಜ್ವರ ಹರಡಿರುವ ಆತಂಕ ಮೂಡಿದೆ. ಕೆಲವು ದಿನಗಳಿಂದ ನಗರದ ವಿವಿಧ ಭಾಗಗಳಲ್ಲಿ ಹಂದಿಗಳು ಸಾವನ್ನಪ್ಪಿದ್ದು, ಜನರನ್ನು ಆತಂಕಕ್ಕೀಡುಮಾಡಿದೆ.

pig-death-in-basavakalyan
ಬಸವಕಲ್ಯಾಣ ಹಂದಿ ಜ್ವರ

ಬಸವಕಲ್ಯಾಣ: ನಗರದ ವಿವಿಧ ಬಡಾವಣೆಗಳಲ್ಲಿ ಕಳೆದ ಎರಡು ದಿನಗಳಿಂದ 9 ಹಂದಿಗಳು ಸಾವನ್ನಪ್ಪಿದ್ದು, ಜನರಲ್ಲಿ ಹಂದಿ ಜ್ವರದ ಆತಂಕ ಮೂಡಿಸಿದೆ.

ನಗರದ ಬಬ್ಬರ ಭಾಗದಲ್ಲಿ 2, ಹಿಮ್ಮತ ನಗರದಲ್ಲಿ 1, ಶಿವಾಜಿ ಚೌಕ ಸಮಿಪ 3, ಬಸ್ ನಿಲ್ದಾಣದ ಸಮಿಪ 3 ಹಂದಿಗಳು ಸೇರಿದಂತೆ ಒಟ್ಟು 9 ಹಂದಿಗಳು ಸಾವನ್ನಪ್ಪಿವೆ. ಹಂದಿಗಳ ಕಳೇಬರವನ್ನು ನಗರಸಭೆ ಸಿಬ್ಬಂದಿ ನಗರದ ಹೊರವಲಯಕ್ಕೆ ಸಾಗಿಸಿ, ಅಂತ್ಯಕ್ರಿಯೆ ನಡೆಸಿದ್ದಾರೆ.

ಹಂದಿಗಳ ಸಾವು, ಜನರಲ್ಲಿ ಮೂಡಿದ ಆತಂಕ

ಕಳೆದ ಕೆಲ ದಿನಗಳ ಹಿಂದೆ ಹುಮನಾಬಾದ್​ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದ ಹಂದಿ ಜ್ವರ(ಎಚ್-೧, ಎನ್-೧)ದಿಂದಾಗಿ ಅನೇಕ ಹಂದಿಗಳು ಸಾವನಪ್ಪಿದ್ದವು. ಹೀಗಾಗಿ ನಗರ ನಿವಾಸಿಗಳಲ್ಲಿ ಆತಂಕ ಮೂಡಿದೆ. ಆದರೆ ಇಲ್ಲಿನ ಹಂದಿಗಳ ಸಾವಿಗೆ ಜ್ವರ ಕಾರಣವಲ್ಲ. ಜ್ವರ ಕಾಣಿಸುವ ಪ್ರದೇಶದಲ್ಲಿ ಹಂದಿಗಳು ಸಾಮೂಹಿಕವಾಗಿ ಮೃತಪಡುತ್ತವೆ. ಇದು ಸಹಜ ಸಾವು ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಹಂದಿಗಳ ಸಾವು ಹಿನ್ನೆಲೆ ನಗರದಲ್ಲಿನ ಎಲ್ಲಾ ಹಂದಿಗಳನ್ನು ತೆರವುಗೊಳಿಸಬೇಕು ಎಂದು ಸಂಬಂಧಪಟ್ಟವರಿಗೆ ಈಗಾಗಲೆ ನೋಟಿಸ್​ ಜಾರಿಗೊಳಿಸಿ ಸೂಚನೆ ನೀಡಲಾಗಿದೆ ಎಂದು ನಗರಸಭೆ ಪರಿಸರ ನೈರ್ಮಲ್ಯ ನಿರೀಕ್ಷಕ ಅಶ್ವೀನ ಕಾಂಬಳೆ ತಿಳಿಸಿದ್ದಾರೆ.

ABOUT THE AUTHOR

...view details