ಕರ್ನಾಟಕ

karnataka

By

Published : Dec 28, 2019, 8:46 PM IST

ETV Bharat / state

ಸ್ಕ್ಯಾನಿಂಗ್​ ಸೆಂಟರ್​​ನಲ್ಲೂ ಕಳ್ಳರಿದ್ದಾರೆ ಎಚ್ಚರಿಕೆ.. ಇಬ್ಬರು ಖದೀಮರ ಬಂಧನ

ಬ್ರೀಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡುವ ನೆಪದಲ್ಲಿ ಆಸ್ಪತ್ರೆ ಸಿಬ್ಬಂದಿಗಳಿಬ್ಬರು ರೋಗಿಯ ಕೊರಳಿನಲ್ಲಿದ್ದ ಬಂಗಾರದ ಆಭರಣವನ್ನು ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

Breams Hospital
ಬ್ರೀಮ್ಸ್ ಆಸ್ಪತ್ರೆ

ಬೀದರ್: ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಹೋದಾಗ ಸೆಂಟರ್​ನಲ್ಲಿ ಪರಿಶೀಲನೆ ನೆಪದಲ್ಲಿ ಬ್ರೀಮ್ಸ್ ಆಸ್ಪತ್ರೆ ಸಿಬ್ಬಂದಿಗಳಿಬ್ಬರು ರೋಗಿಯ ಕೊರಳಿನಲ್ಲಿದ್ದ ಬಂಗಾರದ ಆಭರಣವನ್ನು ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಬ್ರೀಮ್ಸ್ ಆಸ್ಪತ್ರೆ

ಬ್ರೀಮ್ಸ್ ಆಸ್ಪತ್ರೆ ಸಿಬ್ಬಂದಿಗಳಾದ ರಮೇಶ್ ಹಾಗೂ ಸೂರ್ಯಕಾಂತ ಎಂಬುವವರು ಆಸ್ಪತ್ರೆಗೆ ಬಂದ ಮಹಾರಾಷ್ಟ್ರ ಮೂಲದ ನಾಂದೇಡದ ಪಂಚಶಿಲಾ ಎಂಬುವವರನ್ನು ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ವೈದ್ಯರು ಬ್ರೀಮ್ಸ್ ಸೆಂಟರ್​ಗೆ ಕಳುಹಿಸಿದ್ದಾರೆ. ಆದ್ರೆ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ರಮೇಶ ಹಾಗೂ ಸೂರ್ಯಕಾಂತ ಎಂಬ ಇಬ್ಬರು ಪಂಚಶಿಲಾರನ್ನು ಸ್ಕ್ಯಾನಿಂಗ್ ಮಾಡುವ ನೆಪದಲ್ಲಿ ಕೊರಳಿನಲ್ಲಿದ್ದ ಮಂಗಳ ಸೂತ್ರ ಹಾಗೂ ಕಿವಿಯಲ್ಲಿದ್ದ ಓಲೆಯನ್ನು ಕಳವು ಮಾಡಿಕೊಂಡಿದ್ದಾರೆ. ಸ್ಕ್ಯಾನಿಂಗ್ ಮಾಡಿಕೊಂಡು ಹೊರ ಬಂದ ಮೇಲೆ ರೋಗಿ ಪಂಚಶಿಲಾ ಬಂಗಾರದ ಒಡವೆ ನಾಪತ್ತೆಯಾದ ಕುರಿತು ಹೇಳಿದ್ದಾರೆ. ಆದ್ರೆ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಬ್ರೀಮ್ಸ್ ಸಿಬ್ಬಂದಿ ದಬಾಯಿಸಿದ್ದಾರೆ.

ಇದರಿಂದ ನೊಂದ ಮಹಿಳೆ ನ್ಯೂಟೌನ್ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗನ್ನ ವಿಚಾರಿಸಿದಾಗ ಕಳವು ಮಾಡಿರುವುದು ಬಯಲಾಗಿದೆ. ಬಂಧಿತ ಆರೋಪಿಗಳಿಂದ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details