ಕರ್ನಾಟಕ

karnataka

By

Published : Jul 25, 2019, 1:57 AM IST

ETV Bharat / state

ಪ್ಲಾಸ್ಟಿಕ್​​ ಅಕ್ರಮ ದಂಧೆ ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್​ಗಳ ಅಕ್ರಮ ದಂಧೆ ಮಾಡುತ್ತಿರುವ ಅಡ್ಡೆಗಳ ಮೇಲೆ ನಗರಸಭೆ ಆಯುಕ್ತ ಬಲಭೀಮ ಕಾಂಬಳೆ ದಾಳಿ ಮಾಡಿದ್ದು, ಲಕ್ಷಾಂತರ ರೂ. ಮೌಲ್ಯದ ಪ್ಲಾಸ್ಟಿಕ್ ಜಪ್ತಿ ಮಾಡಿಕೊಂಡಿದ್ದಾರೆ.

ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ಜಪ್ತಿ

ಬೀದರ್: ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್​ಗಳ ಅಕ್ರಮ ದಂಧೆ ಮಾಡುತ್ತಿರುವ ಅಡ್ಡೆಗಳ ಮೇಲೆ ನಗರಸಭೆ ಆಯುಕ್ತ ಬಲಭೀಮ ಕಾಂಬಳೆ ದಾಳಿ ಮಾಡಿದ್ದು, ಲಕ್ಷಾಂತರ ರೂ. ಮೌಲ್ಯದ ಪ್ಲಾಸ್ಟಿಕ್ ಜಪ್ತಿ ಮಾಡಿಕೊಂಡಿದ್ದಾರೆ.

ನಗರದ ಗಾಂಧಿ ಗಂಜ ಭಾಗದಲ್ಲಿ ಹೋಲ್​ಸೇಲ್ ಅಂಗಡಿಗಳ ಮೇಲೆ ದಾಳಿ ಮಾಡಿದ ಆಯುಕ್ತ ಬಲಭೀಮ ಕಾಂಬಳೆ ಹಾಗೂ ಕಂದಾಯ ಅಧಿಕಾರಿ ಚಾಂದ ಪಟೇಲ್, 6 ಲಕ್ಷ ರೂ. ಮೌಲ್ಯದ 8 ಕ್ವಿಂಟಾಲ್ ಮೌಲ್ಯದ ಪ್ಲಾಸ್ಟಿಕ್ ಸಾಮಾಗ್ರಿ ಜಪ್ತಿ ಮಾಡಿಕೊಂಡಿದ್ದಾರೆ. ಕಳದ ಒಂದು ವಾರದಲ್ಲಿ 35ಕ್ಕೂ ಅಧಿಕ ಅಡ್ಡೆಗಳ ಮೇಲೆ ದಾಳಿ ಮಾಡಿರುವ ನಗರಸಭೆ, ಪ್ಲಾಸ್ಟಿಕ್ ನಿಷೇಧ ಕುರಿತು ಸಾಮೂಹಿಕ ಅಭಿಯಾನ ನಡೆಸಿದೆ.

ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣ ಭಾಗದಿಂದ ಅಕ್ರಮವಾಗಿ ನಗರಕ್ಕೆ ತಂದು ದೊಡ್ಡ ಮಟ್ಟದಲ್ಲಿ ನಿಷೇಧಿತ ಪ್ಲಾಸ್ಟಿಕ್ ದಂಧೆ ಮಾಡುತ್ತಿರುವ ಕಾರ್ಖಾನೆಗಳ ಮೇಲೂ ದಾಳಿ ಮಾಡುವ ಮೂಲಕ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡುವುದಾಗಿ ನಗರಸಭೆ ಹೇಳಿದೆ.

For All Latest Updates

TAGGED:

ABOUT THE AUTHOR

...view details