ಕರ್ನಾಟಕ

karnataka

ETV Bharat / state

ನಿಯಂತ್ರಣ ತಪ್ಪಿ ಸಿನಿಮೀಯ ರೀತಿ ಗುಡಿಸಲಿನೊಳಗೇ ನುಗ್ಗಿದ ಲಾರಿ..

ಸಿರುಗುಪ್ಪ ರಸ್ತೆಯ ಅವಂಬಾವಿ ಪ್ರದೇಶ ವ್ಯಾಪ್ತಿಯ ರಸ್ತೆಯ ಇಕ್ಕೆಲದಲ್ಲಿದ್ದ ಗುಡಿಸಲಿಗೆ ಲಾರಿಯೊಂದು ಸಿನಿಮೀಯ ರೀತಿಯಲ್ಲಿ ನುಗ್ಗಿದೆ. ಲಾರಿ ನುಗ್ಗಿದ ಪರಿಣಾಮ ಗುಡಿಸಿನ ಗೋಡೆಗಳು ನಜ್ಜು ಗುಜ್ಜಾಗಿವೆ.

By

Published : May 14, 2019, 12:00 PM IST

Updated : May 14, 2019, 12:52 PM IST

ನಿಯಂತ್ರಣ ತಪ್ಪಿ

ಬಳ್ಳಾರಿ :ನಗರದ ಸಿರುಗುಪ್ಪ ರಸ್ತೆಯ ಅವಂಬಾವಿ ಪ್ರದೇಶ ವ್ಯಾಪ್ತಿಯ ರಸ್ತೆಯ ಇಕ್ಕೆಲದಲ್ಲಿದ್ದ ಗುಡಿಸಲಿಗೆ ಲಾರಿಯೊಂದು ಸಿನಿಮೀಯ ರೀತಿಯಲ್ಲಿ ನುಗ್ಗಿದೆ. ಲಾರಿ ನುಗ್ಗಿದ ಪರಿಣಾಮ ಗುಡಿಸಲಿನ ಗೋಡೆಗಳು ನಜ್ಜುಗುಜ್ಜಾಗಿವೆ.

ನಿನ್ನೆಯ ಮಧ್ಯಾಹ್ನ ಬಳ್ಳಾರಿಯಿಂದ ಲಕ್ಷ್ಮೀನಗರ ಕ್ಯಾಂಪಿನ ಮಾರ್ಗವಾಗಿ ಸಂಚರಿಸುತ್ತಿದ್ದ ಈ ಲಾರಿಯು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಏಕಾಏಕಿ ಗುಡಿಸಲಿ ನೊಳಗೆ ನುಗ್ಗಿದೆ.

ಅದೃಷ್ಟವಶಾತ್ ಗುಡಿಸಲಿನಲ್ಲಿ ಯಾರೂ ಇರದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗುಡಿಸಲಿನಲ್ಲಿದ್ದ ಕುಟುಂಬ ಸದಸ್ಯರು ಕೆಲಸಕ್ಕೆಂದು ಹೋದಾಗ ಈ ಘಟನೆ ನಡೆದಿದೆ.

Last Updated : May 14, 2019, 12:52 PM IST

ABOUT THE AUTHOR

...view details