ಕರ್ನಾಟಕ

karnataka

By

Published : May 24, 2020, 2:46 PM IST

ETV Bharat / state

ಕಾರು ಮತ್ತು ಬೈಕ್​ ನಡುವೆ ಡಿಕ್ಕಿ: ಮೂವರಿಗೆ ಗಂಭೀರ ಗಾಯ..

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಬಳಿ ಕಾರು ಮತ್ತು ಬೈಕ್​​ ನಡುವೆ ಅಪಘಾತ ನಡೆದಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ.

Collision between car and bike
ಕಾರು ಮತ್ತು ಬೈಕ್​ ನಡುವೆ ಡಿಕ್ಕಿ

ಬಳ್ಳಾರಿ:ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಬಳಿಯ ಪೆಟ್ರೋಲ್ ಬಂಕ್​​ ಹತ್ತಿರದ ವೀರುಪಾಪುರ ಸ್ಥಳದಲ್ಲಿ ಕಾರು ಮತ್ತು ಬೈಕ್​​ ನಡುವೆ ಅಪಘಾತ ನಡೆದಿದೆ.

ಚಿಕ್ಕಜಗಳೂರುನಿಂದ ಹಗರಿಬೊಮ್ಮನ ಹಳ್ಳಿಗೆ ಬೈಕ್​ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಶಿವಕುಮಾರ್, ಪಿ.ಎಂ ವಿಕಾಸ್, ಪಿ.ಎಂ ಪ್ರಭಾಸ್​​ ಎಂಬುವ ಮೂವರಿಗೆ ಗಂಭೀರ ಗಾಯವಾಗಿದೆ.

ಇನ್ನು ಕಾರಿನಲ್ಲಿ ನಾಗಪ್ಪ ಕಮತಿ ಮತ್ತು ಶಿವಲೀಲಾ ಬೆಂಗಳೂರಿನಿಂದ ಮಾನ್ವಿ ಕಡೆ ಪ್ರಯಾಣ ಮಾಡುತ್ತಿದ್ದರು. ಕೂಡ್ಲಿಗಿ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಲಾಗಿದ್ದರು ಮೂವರಿಗೆ ಗಂಭೀರ ಗಾಯವಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಲಾಗಿದೆ ಎಂದು ಕೂಡ್ಲಿಗಿ ಠಾಣೆಯ ಪೊಲೀಸರು ತಿಳಿಸಿದರು.

ಇನ್ನು ಘಟನೆ ನಡೆದ ಸ್ಥಳಕ್ಕೆ ಕೂಡ್ಲಿಗಿ ಠಾಣೆಯ ತಿಮ್ಮಣ್ಣ ಎಸ್. ಚಾಮನೂರು ಮತ್ತು ಸಿಬ್ಬಂದಿಗಳು ಆಗಮಿಸಿ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details