ಬಳ್ಳಾರಿ:ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಎಲ್.ಎಲ್.ಸಿ ಕಾಲುವೆಗೆ ಪ್ರತಿ ವರ್ಷದ ಯುಗಾದಿ ಹಬ್ಬದ ಮುಂಚಿತವಾಗಿ ನೀರನ್ನು ನಿಲ್ಲಿಸಲಾಗುತ್ತಿತ್ತು. ಆದರೆ ಈ ಬಾರಿ ಯುಗಾದಿ ಹಬ್ಬ ಬಂದಿದ್ದರೂ ಸಹ ಇನ್ನೂ ಕಾಲುವೆಯಲ್ಲಿ ನೀರಿದೆ.
ತುಂಗಭದ್ರ ಡ್ಯಾಂನಿಂದ ಇಲ್ಲಿಗೆ ನೀರನ್ನು ಹರಿಬಿಡಲಾಗುತ್ತದೆ. ಬೇಸಿಗೆ ತಾಪಮಾನ ಹೆಚ್ಚಾದ ಕಾರಣ ಈ ಊರಿನ ಮಕ್ಕಳು ಇಲ್ಲಿಗೆ ಬಂದು ನೀರಿನಲ್ಲಿ ಮಿಂದು ಬಿಸಿಲ ತಾಪವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.