ಕರ್ನಾಟಕ

karnataka

ETV Bharat / state

ಬೇಸಿಗೆ ಬಿಸಿ... ಕಾಲುವೆಯಲ್ಲಿ ಮಿಂದೇಳುತ್ತಿರುವ ಕಮಲಾಪುರ ಬಾಯ್ಸ್

ಬಿಸಿಲ ಬೇಗೆಗೆ ಬೆಂದ ಹೊಸಪೇಟೆ ತಾಲೂಕಿನ ಕಮಲಾಪುರದ ಯುವಕರು ಕಾಲುವೆಯಲ್ಲೇ ಅತೀ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇಡೀ ದಿನ ನೀರಿನಲ್ಲಿ ಮಿಂದು ಆಯಾಸ ತೀರಿಸಿಕೊಳ್ಳುತ್ತಿದ್ದಾರೆ.

By

Published : Apr 6, 2019, 3:25 PM IST

ಕಾಲುವೆಯಲ್ಲಿ ಈಜುತ್ತಿರುವ ಕಮಲಾಪುರ ಬಾಯ್ಸ್

ಬಳ್ಳಾರಿ:ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಎಲ್.ಎಲ್.ಸಿ ಕಾಲುವೆಗೆ ಪ್ರತಿ ವರ್ಷದ ಯುಗಾದಿ ಹಬ್ಬದ ಮುಂಚಿತವಾಗಿ ನೀರನ್ನು ನಿಲ್ಲಿಸಲಾಗುತ್ತಿತ್ತು. ಆದರೆ ಈ ಬಾರಿ ಯುಗಾದಿ ಹಬ್ಬ ಬಂದಿದ್ದರೂ ಸಹ ಇನ್ನೂ ಕಾಲುವೆಯಲ್ಲಿ ನೀರಿದೆ.

ತುಂಗಭದ್ರ ಡ್ಯಾಂನಿಂದ ಇಲ್ಲಿಗೆ ನೀರನ್ನು ಹರಿಬಿಡಲಾಗುತ್ತದೆ. ಬೇಸಿಗೆ ತಾಪಮಾನ ಹೆಚ್ಚಾದ ಕಾರಣ ಈ ಊರಿನ ಮಕ್ಕಳು ಇಲ್ಲಿಗೆ ಬಂದು ನೀರಿನಲ್ಲಿ ಮಿಂದು ಬಿಸಿಲ ತಾಪವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಕಾಲುವೆಯಲ್ಲಿ ಈಜುತ್ತಿರುವ ಕಮಲಾಪುರ ಬಾಯ್ಸ್

ನೀರಿನಲ್ಲೇ ಕಾಲ ಕಳೆಯುವ ಯುವಕರು:

ಬೇಸಿಗೆ ಬಂದ್ರೆ ಸಾಕು ಯುವಕರು ನೀರಿನಲ್ಲಿ ಈಜಾಡುತ್ತಾ ದಿನ ಕಳೆಯುತ್ತಾರೆ. ಬೆಳಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ನಿರಂತರವಾಗಿ ನೀರಿನಲ್ಲಿ ಈಜಾಡುತ್ತಾ ಇರುತ್ತೇವೆ ಎಂದು ಕಮಲಾಪುರದ ಜಿ. ನಾಗರಾಜ್ ಎಂಬುವರು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದರು.

ಇಂದು ಬಳ್ಳಾರಿಯಲ್ಲಿ ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್ ಇದೆ.

ABOUT THE AUTHOR

...view details