ಕರ್ನಾಟಕ

karnataka

By

Published : Jan 30, 2021, 6:40 PM IST

ETV Bharat / state

ಬೈ ಎಲೆಕ್ಷನ್‍ ಘೋಷಣೆಯಾಗಲಿ, ಆಮೇಲೆ ನನ್ನ ನಿರ್ಧಾರ: ಪ್ರಕಾಶ್ ಹುಕ್ಕೇರಿ

ಸುರೇಶ್ ಅಂಗಡಿಯವರ ಅಕಾಲಿಕ ನಿಧನ ಹಿನ್ನೆಲೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಲಿದೆ. ಆ ವೇಳೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ‌. ನಂತರ ನಾನು ನನ್ನ ನಿರ್ಧಾರ ಕೈಗೊಳ್ಳಲಿದ್ದೇನೆ‌ ಎಂದು ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಹೇಳಿದರು.

Hookkari
ಹುಕ್ಕೇರಿ

ಬೆಳಗಾವಿ: ಮೊದಲು ಬೈ ಎಲೆಕ್ಷನ್‍ ಘೋಷಣೆಯಾಗಲಿ. ಬಳಿಕ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಮೇಲೆ ನಾನು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಹೇಳಿದರು.

ಬೈ ಎಲೆಕ್ಷನ್‍ ಘೋಷಣೆಯಾಗಲಿ, ಆಮೇಲೆ ನನ್ನ ನಿರ್ಧಾರ: ಪ್ರಕಾಶ್ ಹುಕ್ಕೇರಿ
ನಗರದಲ್ಲಿ ಮಾತನಾಡಿದ ಅವರು, ದಿ. ಮಾಜಿ‌ ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಅಕಾಲಿಕ ನಿಧನ ಹಿನ್ನೆಲೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಆಗಲಿದೆ. ಆ ವೇಳೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ‌. ನಂತರ ನಾನು ನನ್ನ ನಿರ್ಧಾರ ಕೈಗೊಳ್ಳಲಿದ್ದೇನೆ‌. ಕಾರ್ಯಾಧ್ಯಕ್ಷರಾಗಿ ಹೇಳಿದ್ರೆ ಅದಕ್ಕೆ ನಾನು ಅವರಿಗೆ ವಿರೋಧ ಮಾಡುವುದಿಲ್ಲ, ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ, ಅಂಗಡಿ ಕುಟುಂಬಕ್ಕೆ ಬೆಂಬಲ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದರು.

ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಗಡಿ ವಿಚಾರ ಮುಗಿದು ಹೋಗಿರುವ ಅಧ್ಯಾಯ. ಪದೇ ಪದೆ ಅದನ್ನು ಪ್ರಸ್ತಾಪಿಸುವ ಅವಶ್ಯಕತೆ ಇಲ್ಲ. ಈಗಾಗಲೇ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿ ಸಾಕಷ್ಟು ಬಾರಿ ಅಧಿವೇಶಗಳನ್ನು ಮಾಡಲಾಗಿದೆ. ಇದಲ್ಲದೇ ಮೆಡಿಕಲ್ ಕಾಲೇಜನ್ನೂ ತರೆಲಾಗಿದ್ದು, ಮಹಾರಾಷ್ಟ್ರ ಕ್ಯಾತೆ ತೆಗೆಯುತ್ತಿರುವ ಬಗ್ಗೆ ಮಾಧ್ಯಮದವರು ಪ್ರಸಾರದ ಜೊತೆಗೆ ಮಹತ್ವ ಕೊಡುವುದನ್ನು ನಿಲ್ಲಿಸಬೇಕು ಎಂದರು.

ABOUT THE AUTHOR

...view details