ಕರ್ನಾಟಕ

karnataka

ETV Bharat / state

ಭಕ್ತರಿಂದ ಪಾದಯಾತ್ರೆ:  ಮರಗಾಲು ಕಟ್ಟಿಕೊಂಡು ಹರಕೆ ತೀರಿಸಿದ ಭಕ್ತ

ಯುವಕನೊಬ್ಬ ತನ್ನ ಎರಡು ಕಾಲುಗಳಿಗೆ ಕಟ್ಟಿಗೆಯ ಮರಗಾಲುಗಳನ್ನು ಕಟ್ಟಿಕೊಂಡು ಶ್ರೀಶೈಲಕ್ಕೆ ಯಾತ್ರೆ ಕೈಗೊಂಡಿದ್ದಾನೆ.

By

Published : Mar 23, 2019, 6:41 AM IST

ಭಕ್ತರಿಂದ ಪಾದಯಾತ್ರೆ ಹಾಗೂ ಕಟ್ಟಿಗೆಯ ಮುರಗಾಲುಗಳನ್ನು ಕಟ್ಟಿ ಹರಕೆ ತಿರಿಸಿದ ಭಕ್ತ

ಚಿಕ್ಕೋಡಿ : ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ನೂರಾರು ಭಕ್ತರು ಪಾದಯಾತ್ರೆಯ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ದೇವರ ಕಂಬಿಯನ್ನು ಹಿಡಿದು ನೂರಾರು ಕಿಲೋಮೀಟರ್ ಪಾದಯಾತ್ರೆ ಮಾಡಿ ದೇವರ ದರ್ಶನ ಪಡೆಯಲು ಮುಂದಾಗಿದ್ದಾರೆ, ಇದರ ಜೊತೆಗೆ ಕಟ್ಟಿಗೆಯ ಮುರಗಾಲುಗಳನ್ನು ಕಟ್ಟಿಕೊಂಡು ಪಾದಯಾತ್ರೆಯನ್ನ ಮಾಡುತ್ತಿದ್ದದು ಗಮನಸೆಳೆಯಿತು.

ಭಕ್ತರಿಂದ ಪಾದಯಾತ್ರೆ ಹಾಗೂ ಕಟ್ಟಿಗೆಯ ಮುರಗಾಲುಗಳನ್ನು ಕಟ್ಟಿ ಹರಕೆ ತಿರಿಸಿದ ಭಕ್ತ

ನೂರಕ್ಕೂ ಹೆಚ್ಚು ಸ್ತ್ರೀ, ಪುರುಷರನ್ನು ಹೊಂದಿರುವ ಈ ಭಕ್ತ ತಂಡ ದಿನಂಪ್ರತಿ 30 ರಿಂದ 40 ಕಿಲೋ ಮೀಟರ್ ಪಾದಯಾತ್ರೆ ಮಾಡಿ ಯುಗಾದಿ ಹಬ್ಬಕ್ಕೆ ಸುಮಾರು 600 ಕಿಲೋಮೀಟರ್ ದೂರವಿರುವ ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ತಲುಪಲಿದ್ದಾರೆ.

ಭಕ್ತನ ವಿಶೇಷ ಪಾದಯಾತ್ರೆ:

ಕಾಗವಾಡ ತಾಲೂಕಿನ ಉಗಾರ ಗ್ರಾಮದ ಮುರಗೇಶ ಕುಂಬಾರ (28) ಎಂಬ ಯುವಕ ತನ್ನ ಎರಡು ಕಾಲುಗಳಿಗೆ ಕಟ್ಟಿಗೆಯ ಮರುಗಾಲುಗಳನ್ನು ಕಟ್ಟಿಕೊಂಡು ಪಾದಯಾತ್ರೆ ಮಾಡುತ್ತಿದ್ದಾನೆ. ಸುಮಾರು ಮೂರು ವರ್ಷಗಳಿಂದ ಈ ರೀತಿಯ ಹರಕೆಯನ್ನ ತಿರಿಸುತ್ತಾ ಬಂದಿದ್ದಾರಂತೆ.

ABOUT THE AUTHOR

...view details