ಕರ್ನಾಟಕ

karnataka

ETV Bharat / state

ಸಾಧನೆ ನೋಡಿ ಮತ ನೀಡಿ:  ಪ್ರಕಾಶ್ ಹುಕ್ಕೇರಿ ಮನವಿ

ಕಾಗವಾಡ ಹಾಗೂ ಅಥಣಿ ತಾಲೂಕಿನಲ್ಲಿ ಅನೇಕ ಜನಪರವಾದ ಕಾರ್ಯಗಳನ್ನು ಮಾಡಿದ್ದೇವೆ. ಅದೇ ರೀತಿ ಶಾಸಕ ಶ್ರೀಮಂತ ಪಾಟೀಲರು ಕೂಡ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಪಕ್ಷ ಅಭಿವೃದ್ಧಿಯ ಪಕ್ಷ. ನಮ್ಮ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುವೆ ಎಂದರು.

By

Published : Apr 21, 2019, 9:13 AM IST

ಪ್ರಕಾಶ್ ಹುಕ್ಕೇರಿ

ಚಿಕ್ಕೋಡಿ:ನಾನು ಸಂಸದನಾಗಿ ಚಿಕ್ಕೋಡಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಕೆಲಸ ಮಾಡಿರುವೆ. ಮಾಡಿದ ಸಾಧನೆ ನೋಡಿ ನನಗೆ ಮತ ನೀಡಿ ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಹೇಳಿದರು.

ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಮತದಾರರನ್ನು ಉದ್ದೇಶಿಸಿ ‌ಮಾತನಾಡಿದ ಅವರು, ಇನ್ನೂ ಹೆಚ್ಚಿನ ಕೆಲಸ ಮಾಡಲು ನನಗೆ ಎಲ್ಲ ಮತದಾರರು ಮತ್ತೊಂದು ಸಲ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ

ಕಾಗವಾಡ ಹಾಗೂ ಅಥಣಿ ತಾಲೂಕಿನಲ್ಲಿ ಅನೇಕ ಜನಪರವಾದ ಕಾರ್ಯಗಳನ್ನು ಮಾಡಿದ್ದೇವೆ. ಅದೇ ರೀತಿ ಶಾಸಕ ಶ್ರೀಮಂತ ಪಾಟೀಲರು ಕೂಡ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಪಕ್ಷ ಅಭಿವೃದ್ಧಿಯ ಪಕ್ಷ. ನಮ್ಮ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುವೆ ಎಂದರು.

ಈಗಾಗಲೇ ಕಾಗವಾಡ ಕ್ಷೇತ್ರದ ಶಾಸಕರನ್ನು ಅತ್ಯಂತ ಹೆಚ್ಚಿನ ಮತಗಳಿಂದ ಆರಿಸಿ ಕೊಟ್ಟಿದ್ದೀರಿ ಹಾಗೆ ನನಗೂ‌ ಕೂಡಾ ಆಶೀರ್ವಾದ ಮಾಡಿ. ಸಂಸದನಾಗಿ ದೆಹಲಿಗೆ ಕಳಿಸಿ ಎಂದು ಕೇಳಿಕೊಂಡರು.

ABOUT THE AUTHOR

...view details