ಗೋಕಾಕ(ಬೆಳಗಾವಿ):ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಜನರು ಜಾಗೃತರಾಗಿದ್ದು, ಬೆಳಗಾವಿ ಲೋಕಸಭಾ ಚುನಾವಣೆಯನ್ನೂ ಲೆಕ್ಕಿಸದೆ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ.
ಚುನಾವಣೆಗೆ ಜನ ನೀರಸ ಪ್ರತಿಕ್ರಿಯೆ ನೀಡಿದ್ದು, ಗೋಕಾಕ್ನಲ್ಲಿ ಮತದಾನ ಮುಖ್ಯವಲ್ಲ ಜೀವ ಮುಖ್ಯ ಎಂದು ಜನತೆ ಸಾಬೀತುಪಡಿಸಿದಂತಿತ್ತು. ಆದರೆ, ಲಸಿಕಾ ಕೇಂದ್ರ ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರ ಮಾತ್ರ ಗಾಳಿಗೆ ತೂರಿ ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು. ಇನ್ನು ಆರೋಗ್ಯ ಅಧಿಕಾರಿಗಳು ಸಹಿತ ನಿರ್ಲಕ್ಷ್ಯ ವಹಿಸಿದ್ದು, ಜನರನ್ನು ಸಾಮಾಜಿಕ ಅಂತರದಲ್ಲಿ ನಿಲ್ಲಿಸಲು ವಿಫಲರಾಗಿದ್ದಾರೆ.