ಕರ್ನಾಟಕ

karnataka

ETV Bharat / state

ಮಹೇಶ್​​​ ಕುಮಟಳ್ಳಿ ರಾಜೀನಾಮೆ ವಿರುದ್ಧ ಕಾರ್ಯಕರ್ತರ ಆಕ್ರೋಶ

ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ರಾಜೀನಾಮೆ ನೀಡಿರುವುದನ್ನು ಕ್ಷೇತ್ರದ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

By

Published : Jul 10, 2019, 6:56 PM IST

ಮಹೇಶ್​ ಕುಮಟಳ್ಳಿ ರಾಜೀನಾಮೆ ವಿರುದ್ಧ ಕಾರ್ಯಕರ್ತರ ಅಸಮಾಧಾನ

ಚಿಕ್ಕೋಡಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ಮಹೇಶ್​​ ಕುಮಟಳ್ಳಿ ರಾಜೀನಾಮೆ ನೀಡಬಾರದಿತ್ತು ಎಂಬ ಚರ್ಚೆಗಳು ಈಗ ಅಥಣಿ ಮತ ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ.

ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಮತದಾರರು ಮಹೇಶ್​​​ ಕುಮಟಳ್ಳಿ ಅವ‌‌‌ರಿಗೆ ಹೇಗೆಲ್ಲಾ ಬೆಂಬಲ ನೀಡಿ ಮತ ಹಾಕಿ ಗೆಲ್ಲಿಸಿದ್ದಾರೆ ಎಂದು ಚರ್ಚೆ ಮಾಡಿದ್ದಾರೆ. ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಯಲ್ಲಪ್ಪಾ ಕಾಂಬಳೆ ಎಂಬುವವರು ವಿಧಾನಸಭಾ ಚುನಾವಣಾ ವೇಳೆ ಮಹೇಶ್​ ಕುಮಟಳ್ಳಿ ಗೆಲುವಿಗಾಗಿ ಸಾಕಷ್ಟು ಪ್ರಚಾರ ಕೈಗೊಂಡಿದ್ದರು. ಕುಮಟಳ್ಳಿ ಅವರಿಗೆ ಬೆಂಬಲ ಸೂಚಿಸಿ ಸಪ್ತಸಾಗರ ಗ್ರಾಮದ ಪ್ರತಿ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೇಳಿಕೊಂಡಿದ್ದರು. ಮಹೇಶ್​ ಕುಮಟಳ್ಳಿ ಆಯ್ಕೆಯಾಗುವಂತೆ ಗ್ರಾಮದ ದೇವತೆಗೆ ಹರಕೆ ಕೂಡಾ ಮಾಡಿ ಗೆದ್ದ ನಂತರ ದೇವಿಗೆ ಧೀರ್ಗ ದಂಡ ನಮಸ್ಕಾರ ಹಾಕಿ ಹರಕೆ ಕೂಡಾ ತೀರಿಸಿದ್ದಾರೆ.

ಮಹೇಶ್​ ಕುಮಟಳ್ಳಿ ರಾಜೀನಾಮೆ ವಿರುದ್ಧ ಕಾರ್ಯಕರ್ತರ ಅಸಮಾಧಾನ

ಆದರೆ ಕುಮಟಳ್ಳಿ ಮಾತ್ರ ಈವರೆಗೂ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡದೆ ಈಗ ರಾಜೀನಾಮೆ ಕೊಟ್ಟಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details