ಕರ್ನಾಟಕ

karnataka

By

Published : Oct 21, 2022, 7:32 AM IST

ETV Bharat / state

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು: ಪ್ರಾಣಾಪಾಯದಿಂದ ದಂಪತಿ ಪಾರು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹಳ್ಳಕ್ಕೆ ಬಿದ್ದಿದ್ದು, ಕಾರಲ್ಲಿದ್ದ ದಂಪತಿಗಳನ್ನು ಸ್ಥಳಿಯರು ರಕ್ಷಣೆ ಮಾಡಿರುವ ಘಟನೆ ಅಂಕಲಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

KN_BGM_
ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹಳ್ಳಕ್ಕೆ ಬಿದ್ದಿದ್ದು, ಕಾರೊಳಗಿದ್ದ ದಂಪತಿಗಳನ್ನು ಸ್ಥಳೀಯರು ರಕ್ಷಿಣೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಜಿಲ್ಲೆಯ ಗೋಕಾಕ ತಾಲೂಕಿನ ಧೊಪದಾಳ ಗ್ರಾಮದ ಸಿದ್ದಪ್ಪ ಕೊಣ್ಣೂರ ಹಾಗೂ ಅವರ ಧರ್ಮಪತ್ನಿ ಸೀಮಾ ಕೊಣ್ಣೂರನ್ನು ರಕ್ಷಣೆ ಮಾಡಲಾಗಿದೆ. ದಂಪತಿ ಬೆಳಗಾವಿಯಿಂದ ಸ್ವಗ್ರಾಮ ಧೂಪದಾಳಕ್ಕೆ ಕಾರಿನಲ್ಲಿ ಆಗಮಿಸುತ್ತಿದ್ದ ವೇಳೆ ಕಾರಿನ ನಿಯಂತ್ರಣ ತಪ್ಪಿ ಕಾರು ಸಮೇತ ದಂಪತಿ ಹಳ್ಳಕ್ಕೆ ಬಿದ್ದಿದ್ದಾರೆ. ಇದನ್ನು ಕಂಡ ಸ್ಥಳಿಯರೂ ಕೂಡಲೇ ಇವರ ಸಹಾಯಕ್ಕೆ ದೌಡಾಯಿಸಿ ದಂಪತಿಗಳನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಕ್ರೇನ್​ ಮೂಲಕ ಕಾರನ್ನು ಹಳ್ಳದಿಂದ ಹೊರ ತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಅಂಕಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ಇದನ್ನೂ ಓದಿ:ರಾಜ್ಯದಲ್ಲಿ ಮುಂದುವರೆಯಲಿರುವ ವರ್ಷಧಾರೆ, 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ABOUT THE AUTHOR

...view details