ಕರ್ನಾಟಕ

karnataka

By

Published : Oct 9, 2019, 11:37 PM IST

ETV Bharat / state

ಹೈಕಮಾಂಡ್​​ ಗುರುತರ ಜವಾಬ್ದಾರಿ ನೀಡಿದೆ: ಎಸ್​​​.ಆರ್​.ಪಾಟೀಲ್​​​

ಹೈಕಮಾಂಡ್ ಗುರುತರ ಜವಾಬ್ದಾರಿ ನೀಡಿದೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹೇಳಿದರು.

ಎಸ್​.ಆರ್​ ಪಾಟೀಲ್

ಬೆಂಗಳೂರು: ಹೈಕಮಾಂಡ್ ಗುರುತರ ಜವಾಬ್ದಾರಿ ನೀಡಿದೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಹೇಳಿದರು.

ಮೇಲ್ಮನೆ ಪ್ರತಿಪಕ್ಷ ನಾಯಕ ಸ್ಥಾನ ಘೋಷಣೆ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಹಿಂದೆ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೆ. ಸಭಾನಾಯಕನಾಗಿಯೂ ಕೆಲಸ ನಿರ್ವಹಿಸಿದ್ದೇನೆ. ಈಗ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದ್ದಾರೆ. ಸೋನಿಯಾ ಗಾಂಧಿಯವರಿಗೆ ಅಭಿನಂದನೆಗಳು ಎಂದು ಕೃತಜ್ಞತೆ ಸಲ್ಲಿಸಿದರು.

ನಾಳೆ ಸದನದಲ್ಲಿ ಪ್ರವಾಹ ಸಂತ್ರಸ್ತರ ವಿಚಾರ ಪ್ರಸ್ತಾಪ ಮಾಡಲಾಗುತ್ತದೆ. ಸಂತ್ರಸ್ತರ ಸಮಸ್ಯೆ ಮುಂದಿಟ್ಟು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ABOUT THE AUTHOR

...view details