ಬೆಂಗಳೂರು: ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಮಕರ ಸಂಕ್ರಾತಿಯ ಪ್ರಯುಕ್ತ ಸೂರ್ಯ ರಶ್ಮಿ ಲಿಂಗದ ಮುಂದಿರುವ ನಂದಿಯ ಕೊಂಬಿನಿಂದ ಹಾದು, ಶಿವನ ಪಾದವನ್ನು ಸ್ಪರ್ಶಿಸುತ್ತದೆ.
ಸಂಜೆ 5.25 ರಿಂದ 5.27 ರೊಳಗೆ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಲಿವೆ. ಈ ವಿಸ್ಮಯವನ್ನು ನೋಡಲು ಭಕ್ತರು ಕಾತುರದಿಂದ ದೇವಸ್ಥಾನದತ್ತ ಆಗಮಿಸುತ್ತಿದ್ದಾರೆ.