ಕರ್ನಾಟಕ

karnataka

ರೌಡಿ ಲಕ್ಷ್ಮಣ ಕೊಲೆ ಪ್ರಕರಣ: ವರ್ಷಿಣಿಯಿಂದ ಪೋಷಕರಿಗೆ ನೋವಿನ ಪತ್ರ

By

Published : Jun 8, 2019, 7:26 PM IST

'ಹಿಂದೆ ನಡೆದಿರುವ ಘಟನಾವಳಿಗಳಿಗೆ ಕಾರಣ ನಾನೇ. ನನ್ನನ್ನು ದಯವಿಟ್ಟು ಎಲ್ಲರೂ ಕ್ಷಮಿಸಿ ಬಿಡಿ. ಅಮ್ಮ,ಅಪ್ಪ ನೀವೆಲ್ಲರೂ ಒಳ್ಳೆಯವರು, ನಾನು ಕೆಟ್ಟವಳು. ನನ್ನಿಂದ ತುಂಬಾ ತೊಂದರೆಯಾಗಿದೆ' ಎಂದು ಅಳಲು ತೋಡಿಕೊಂಡಿದ್ದಾಳೆ.

ವರ್ಷಿಣಿಯಿಂದ ಪೋಷಕರಿಗೆ ನೋವಿನ ಪತ್ರ

ಬೆಂಗಳೂರು:ಬೆಂಗಳೂರಿನ ಪಾತಕ ಲೋಕವನ್ನೇ ಬೆಚ್ಚಿ ಬೀಳಿಸಿದ್ದ ರೌಡಿ ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವರ್ಷಿಣಿ ತನ್ನ ಪೋಷಕರಿಗೆ ಪತ್ರ ಬರೆದು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾಳೆ.

ಶಿವಮೊಗ್ಗ ಜೈಲಿನಿಂದ ಪತ್ರ ಬರೆದಿರುವ ವರ್ಷಿಣಿ, ಲಕ್ಷ್ಮಣ ಕೊಲೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಘಟನೆಗೆ ನಾನೇ ಕಾರಣಳಾಗಿದ್ದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.

ಪತ್ರದಲ್ಲಿ ಏನಿದೆ?

ಹಲೋ ಮಮ್ಮಿ-ಡ್ಯಾಡಿ , Hi hello every one.... ಮೊದಲು ಎಲ್ಲರಿಗೂ ನನ್ನ ಧನ್ಯವಾದ ತಿಳಿಸುತ್ತೇನೆ. ಏನೆಲ್ಲಾ ನಡೆದಿದೆ ಅದಕ್ಕೆಲ್ಲಾ ಕಾರಣ ನಾನೇ. ನನ್ನನ್ನು ದಯವಿಟ್ಟು ಎಲ್ಲರೂ ಕ್ಷಮಿಸಿ ಬಿಡಿ. ಅಮ್ಮ-ಅಪ್ಪ ನೀವೆಲ್ಲರೂ ಒಳ್ಳೆಯವರು, ನಾನು ಕೆಟ್ಟವಳು. ನಾನು ಕೆಟ್ಟ ಹುಡುಗಿ, ನನ್ನಿಂದ ತುಂಬಾ ತೊಂದರೆಯಾಗಿದೆ ಎಂದು ಬರೆದಿದ್ದಾಳೆ.

ನನ್ನನ್ನು ಜೈಲಿನಿಂದ ಹೊರಗಡೆ ಕರೆದುಕೊಂಡು ಹೋಗಿ Take me out fast... ನನಗೆ ಜೈಲಿನಲ್ಲಿ ಇರೋದಕ್ಕೆ ಹಿಂಸೆ ಆಗ್ತಾ ಇದೆ. ಎಲ್ಲರೂ ನಮ್ಮ ಫ್ಯಾಮಿಲಿಯಲ್ಲಿ ಒಳ್ಳೆಯವರು. ಅಂಕಲ್ ಲಕ್ಷ್ಮಣ ಫ್ಯಾಮಿಲಿ, ನಮ್ಮ ಫ್ಯಾಮಿಲಿ ಎಲ್ಲರೂ ಒಳ್ಳೆಯವರು ಎಂದಿರುವ ಆಕೆ, ನನಗೆ ಜೈಲಿನಲ್ಲಿ ಇರಲು ಆಗುತ್ತಿಲ್ಲ ಎಂದಿದ್ದಾಳೆ.

ನನಗೆ ಶಾಂತಿ ಬೇಕು. love you Amma.... I love u appa ಎಂದು ತನ್ನ ಹುಟ್ಟುಹಬ್ಬವಾದ ಜೂ.4ರಂದು ಪತ್ರ ಬರೆದಿದ್ದಾಳೆ.

ABOUT THE AUTHOR

...view details