ಕರ್ನಾಟಕ

karnataka

ETV Bharat / state

ಕುಮಾರಣ್ಣ ಬೇಕು ಅಂತಾ ದೇವೇಗೌಡರ ಕಾರಿಗೆ ಮುತ್ತಿಗೆ ಹಾಕಿದ ಜೆಡಿಎಸ್​ ಕಾರ್ಯಕರ್ತರು

ಕುಮಾರಣ್ಣ ಬೇಕು ಎಂದು ಹಾಗೂ ಬಿಜೆಪಿ, ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿ ಜೆಡಿಎಸ್​ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

By

Published : Jul 7, 2019, 9:41 PM IST

ಜೆಡಿಎಸ್ ಕಾರ್ಯಕರ್ತರಿಂದ ದೇವೇಗೌಡರ ಕಾರಿಗೆ ಮುತ್ತಿಗೆ

ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗಾಗಿ ಜೆಪಿ ಭವನದಿಂದ ಖಾಸಗಿ ಹೋಟೆಲ್​​ಗೆ ತೆರಳಿದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ದೊಡ್ಡಗೌಡರ ಕಾರಿಗೆ ಮುತ್ತಿಗೆ ಹಾಕಿ, ಕುಮಾರಸ್ವಾಮಿ ಪರ ಘೋಷಣೆ ಕೂಗಿದರು.

ಜೆಡಿಎಸ್ ಕಾರ್ಯಕರ್ತರಿಂದ ದೇವೇಗೌಡರ ಕಾರಿಗೆ ಮುತ್ತಿಗೆ

ಜೆಪಿ ಭವನದಿಂದ ಜೆಡಿಎಸ್ ಸಚಿವರಾದ ಬಂಡೆಪ್ಪ ಕಾಶೆಂಪೂರ್, ಹೆಚ್.ಡಿ.ರೇವಣ್ಣ, ವೆಂಕಟರಾವ್​ ನಾಡಗೌಡ, ಸಾ.ರಾ.ಮಹೇಶ್, ಸಂಸದ ಪ್ರಜ್ವಲ್ ರೇವಣ್ಣ ತಾಜ್ ವೆಸ್ಟ್ ಎಂಡ್​​ಗೆ ತೆರಳಿದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ದೇವೇಗೌಡರ ಕಾರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ರಾಜೀನಾಮೆ ನೀಡಬಾರದು. ಖರ್ಗೆಗೆ ಸಿಎಂ ಸ್ಥಾನ ಬಿಟ್ಟು‌ಕೊಡಬಾರದು ಎಂದು ಆಗ್ರಹಿಸಿದರು. ಕುಮಾರಣ್ಣ ಬೇಕು‌ ಎಂದು ಘೋಷಣೆ ಕೂಗುವುದರ ಜತೆಗೆ ಬಿಜೆಪಿ, ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

For All Latest Updates

ABOUT THE AUTHOR

...view details