ಕರ್ನಾಟಕ

karnataka

ETV Bharat / state

ಪೊಲೀಸ್ ಭದ್ರತೆಯಲ್ಲಿ ಅಧಿವೇಶನಕ್ಕೆ ಆಗಮಿಸಿದ ಜೆಡಿಎಸ್ ಶಾಸಕರು

ಮೊನ್ನೆಯಿಂದ ರೆಸಾರ್ಟ್​ನಲ್ಲಿದ್ದ ಜೆಡಿಎಸ್ ಶಾಸಕರು ಇಂದು ಪೊಲೀಸ್​ ಭದ್ರತೆಯೊಂದಿಗೆ ವಿಧಾನಸೌಧದಲ್ಲಿ ಇಂದಿನಿಂದ ಆರಂಭವಾಗಿರುವ ಅಧಿವೇಶನಕ್ಕೆ ತೆರಳಿದ್ದಾರೆ.

By

Published : Jul 12, 2019, 12:10 PM IST

ಅಧಿವೇಶನಕ್ಕೆ ಹೊರಟ ಜೆಡಿಎಸ್ ಶಾಸಕರು

ಬೆಂಗಳೂರು:ಇಂದಿನಿಂದ ವಿಧಾನಮಂಡಲ ಮುಂಗಾರು ಅಧೀವೇಶನ ಆರಂಭವಾಗಿದ್ದು, ನಾಲ್ಕು ದಿನಗಳಿಂದ ರೆಸಾರ್ಟ್ ನಲ್ಲಿದ್ದ ಜೆಡಿಎಸ್ ಶಾಸಕರು‌‌ ಅಧಿವೇಶನಕ್ಕೆ ಬಸ್ಸಿನಲ್ಲಿ ಆಗಮಿಸಿದ್ರು.

ಅಧಿವೇಶನಕ್ಕೆ ಹೊರಟ ಜೆಡಿಎಸ್ ಶಾಸಕರು

ದೇವನಹಳ್ಳಿ ತಾಲೂಕಿನ ಕೊಡಗುರ್ಕಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ತಂಗಿದ್ದ ಶಾಸಕರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಖಾಸಗಿ ಬಸ್ ನಲ್ಲಿ ವಿಧಾನಸೌಧದತ್ತ ಕರೆತರಕಲಾಯಿತು. ರೆಸಾರ್ಟ್‌ ರಾಜಕೀಯ ಇವತ್ತಿಗೆ ಕೊನೆಯಾಗುವ ಸಾಧ್ಯತೆ ಕಡಿಮೆ ಇದ್ದು, ಅಧಿವೇಶನ ಮುಗಿದ ಬಳಿಕ ಸಿಎಂ ಏನು ಕ್ರಮ ಕೈಗೊಳ್ಳುತ್ತಾರೋ ಅದರ ಮೇಲೆ ಜೆಡಿಎಸ್ ಶಾಸಕರ ರೆಸಾರ್ಟ್ ರಾಜಕೀಯ ನಿಂತಿದೆ ಎನ್ನಲಾಗ್ತಿದೆ.

ABOUT THE AUTHOR

...view details