ಕರ್ನಾಟಕ

karnataka

By

Published : Sep 25, 2022, 10:46 PM IST

Updated : Sep 25, 2022, 10:54 PM IST

ETV Bharat / state

ಬುದ್ಧಿ ಹೇಳಿದ ತಂದೆಯ ಮರ್ಮಾಂಗಕ್ಕೆ ಸಲಾಕೆಯಿಂದ ಹೊಡೆದು ಹತ್ಯೆ: ಬೆಂಗಳೂರಲ್ಲಿ ಮಗ ಅರೆಸ್ಟ್

ಬುದ್ಧಿವಾದ ಹೇಳಿದ್ದಕ್ಕೆ ಅಪ್ಪನ ಮರ್ಮಾಂಗಕ್ಕೆ ಮಗ ಸಲಾಕೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

father-killed-by-son-at-bengaluru
ಬುದ್ದಿ ಹೇಳಿದ ತಂದೆಯ ಮಾರ್ಮಾಂಗಕ್ಕೆ ಸಲಾಕೆಯಿಂದ ಹೊಡೆದು ಹತ್ಯೆ : ಪುತ್ರನ ಬಂಧನ

ಬೆಂಗಳೂರು: ಬುದ್ದಿವಾದ ಹೇಳಿದ ತಂದೆಯ ಮರ್ಮಾಂಗಕ್ಕೆ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ ಮಗನನ್ನು ಕಾಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಖಾಜಿಸೊನ್ನನಹಳ್ಳಿಯ ನಿವಾಸಿ ಚನ್ನಬಸವರಾಜು (56) ಕೊಲೆಯಾದ ವ್ಯಕ್ತಿ. ಪುತ್ರ ರಾಕೇಶ್ ಕುಮಾರ್ (23) ಬಂಧಿತ ಆರೋಪಿ.

ಕೊಲೆಯಾದ ಚನ್ನಬಸವರಾಜು ಅವರ ಹಿರಿಯ ಮಗ ವಕೀಲನಾಗಿದ್ದು, ಮತೊಬ್ಬ ಪುತ್ರ ರಾಕೇಶ್ 10ನೇ ತರಗತಿವರೆಗೆ ಮಾತ್ರ ಓದಿ ಹೊಲದಲ್ಲಿ ಕೆಲಸ ಮಾಡುತ್ತಿದ್ದನಂತೆ. ಇಂದು ಇಬ್ಬರೂ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಳ್ಳೆಯ ವ್ಯಾಸಂಗ ಮಾಡಿದ್ದರೆ ನಿನಗೆ ಉತ್ತಮ ಹುದ್ದೆಯಲ್ಲಿ ಕೆಲಸ ಮಾಡಬಹುದಿತ್ತು ಎಂದು ಚನ್ನಬಸವರಾಜು ತನ್ನ ಪುತ್ರನಾದ ರಾಕೇಶ್​ಗೆ ಬುದ್ದಿವಾದ ಹೇಳಿದ್ದಾರೆ.

ಇದರಿಂದ ಕೋಪಗೊಂಡ ರಾಕೇಶ್ ಪಕ್ಕದಲ್ಲಿದ್ದ ಸಲಾಕೆಯಿಂದ ತಂದೆ ಚನ್ನಬಸವರಾಜು ಮರ್ಮಾಂಗಕ್ಕೆ ಹಲ್ಲೆ ನಡೆಸಿದ್ದ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಚನ್ನಬಸವರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಕಾಡುಗೋಡಿ ಠಾಣಾ ಪೊಲೀಸರು ರಾಕೇಶ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ :12ರ ಬಾಲಕನೊಂದಿಗೆ ನಾಲ್ವರಿಂದ ಅಸ್ವಾಭಾವಿಕ ಲೈಂಗಿಕ ಕ್ರಿಯೆ: ಖಾಸಗಿ ಅಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ

Last Updated : Sep 25, 2022, 10:54 PM IST

ABOUT THE AUTHOR

...view details