ಕರ್ನಾಟಕ

karnataka

ETV Bharat / state

ಸ್ಪೀಕರ್​​ ಕಚೇರಿಗೆ ಬರಲು ಅತೃಪ್ತರ ಹಿಂದೇಟು: ರಾಜೀನಾಮೆ ಪತ್ರ ಮಾತ್ರ ಕಳಿಸಲು ನಿರ್ಧಾರ!

ಖುದ್ದಾಗಿ ಆಗಮಿಸಿ ಸ್ಪೀಕರ್​ ಭೇಟಿ ಮಾಡುವ ಬದಲು ಕೇವಲ ಕ್ರಮಬದ್ಧ ರೀತಿಯಲ್ಲಿ ಬರೆದ ರಾಜೀನಾಮೆ ಪತ್ರಗಳನ್ನು ಸ್ಪೀಕರ್ ಕಚೇರಿಗೆ ತಲುಪಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

By

Published : Jul 10, 2019, 12:16 PM IST

ಅತೃಪ್ತ ಶಾಸಕರು

ಬೆಂಗಳೂರು: ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ಸ್ಪಷ್ಟೀಕರಣ ನೀಡಿರುವ ಕಾರಣ 9 ಅತೃಪ್ತ ಶಾಸಕರು ಇಂದು ಮತ್ತೊಂದು ರಾಜೀನಾಮೆ ಪತ್ರವನ್ನು ಸ್ಪೀಕರ್ ಕಚೇರಿಗೆ ತಲುಪಿಸುತ್ತಿದ್ದಾರೆ. ಖುದ್ದಾಗಿ ಬರುವ ಬದಲು ಕೇವಲ ಪತ್ರಗಳನ್ನಷ್ಟೇ ತಲುಪಿಸಲಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎನ್ನುವ ಕಾರಣಕ್ಕೆ ಮತ್ತೊಮ್ಮೆ ರಾಜೀನಾಮೆ ಪತ್ರ ಸಲ್ಲಿಸಲು 9 ಅತೃಪ್ತ ಶಾಸಕರು ಮುಂಬೈನಿಂದ ಇಂದು ಬೆಂಗಳೂರಿಗೆ ಬರಲಿದ್ದಾರೆ. ಸ್ಪೀಕರ್ ಕಚೇರಿಗೆ ತೆರಳಿ ಮತ್ತೊಮ್ಮೆ ರಾಜೀನಾಮೆ‌ ಪತ್ರ ಕೊಡಲಿದ್ದಾರೆ ಎನ್ನಲಾಗಿತ್ತು. ಹೆಚ್. ವಿಶ್ವನಾಥ್ ಸೇರಿದಂತೆ ಉಳಿದ 8 ಶಾಸಕರು ಈ ತೀರ್ಮಾನಕ್ಕೆ ಬಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಯೋಜನೆ ಬದಲಾಗಿದ್ದು, ಖುದ್ದಾಗಿ ಆಗಮಿಸುವ ಬದಲು ಕೇವಲ ಕ್ರಮಬದ್ಧ ರೀತಿಯಲ್ಲಿ ಬರೆದ ರಾಜೀನಾಮೆ ಪತ್ರಗಳನ್ನು ಸ್ಪೀಕರ್ ಕಚೇರಿಗೆ ತಲುಪಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕಳೆದ ರಾತ್ರಿಯೇ ಮಾಜಿ ಡಿಸಿಎಂ ಆರ್. ಅಶೋಕ್ ಮತ್ತು ಕೆ.ಜಿ. ಬೊಪಯ್ಯ ಮುಂಬೈಗೆ ತೆರಳಿದ್ದು, ಕಾನೂನು ರೀತಿಯಲ್ಲಿ ಶಾಸಕರಿಗೆ ರಾಜೀನಾಮೆ ಸಲ್ಲಿಕೆಗೆ ಇರುವ ಎಲ್ಲಾ ಅವಕಾಶಗಳಂತೆ ಸಲಹೆ ನೀಡಿ ಕ್ರಮಬದ್ಧವಾಗಿ ರಾಜೀನಾಮೆ ಪತ್ರಗಳನ್ನು ಬರೆಸಲಿದ್ದಾರೆ. ನಂತರ ಅವೆಲ್ಲವನ್ನು ಸ್ಪೀಕರ್ ಕಚೇರಿಗೆ ತಲುಪುವಂತೆ ನೋಡಿಕೊಳ್ಳಲಿದ್ದಾರೆ. ಅದಕ್ಕಾಗಿಯೇ ಮುಂಬೈಗೆ ತೆರಳಿದ್ದಾರೆ ಎನ್ನಲಾಗ್ತಿದೆ.

ಈಗಾಗಲೇ ಐವರ ರಾಜೀನಾಮೆ ಪತ್ರ ಕ್ರಮಬದ್ಧವಾಗಿವೆ ಎಂದಿರುವ ಸ್ಪೀಕರ್, ಅವರನ್ನು ಪ್ರತ್ಯೇಕವಾಗಿ ದಿನಾಂಕ‌ ನಿಗದಿ ಮಾಡಿ ರಾಜೀನಾಮೆಗೆ ಕಾರಣ ನೀಡುವಂತೆ ತಿಳಿಸಿದ್ದಾರೆ. ಹಾಗಾಗಿ ಇಂದು ಬಂದರೂ ಕೂಡ ಮತ್ತೊಂದು ದಿನ ಅವರನ್ನು ಬರಲು ತಿಳಿಸುತ್ತಾರೆ ಎನ್ನುವ ಕಾರಣಕ್ಕೆ ಇಂದು ಅವರು ಬರದಂತೆ ತಡೆದು ಕೇವಲ ರಾಜೀನಾಮೆ ಪತ್ರಗಳನ್ನು ಮಾತ್ರ ಫ್ಯಾಕ್ಸ್ ಮೂಲಕ ತಲುಪಿಸಲು ಪ್ಲಾನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details