ಕರ್ನಾಟಕ

karnataka

ETV Bharat / state

ಸಿಲಿಂಡರ್ ಬದಲಾಯಿಸುವಾಗ ಜೋಕೆ... ಗ್ಯಾಸ್​ ಸೋರಿಕೆಯಾಗಿ ಸ್ಫೋಟ: ಒಂದೇ ಕುಟುಂಬದ ಮೂವರು ಗಂಭೀರ

ಅಡುಗೆ ಮಾಡಲು ಮನೆಯಲ್ಲಿದ್ದ ಸಿಲಿಂಡರ್ ಬದಲಾವಣೆ ಮಾಡುವ ಸಮಯದಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡರ್​​ ಸ್ಪೋಟಗೊಂಡಿದೆ. ಘಟನೆಯಲ್ಲಿ ಪರಮೇಶ್ವರಯ್ಯ, ಹೊನ್ನಮ್ಮ ಮತ್ತು ಯತೀಶ್ ದೇವರ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ.

By

Published : Oct 7, 2019, 9:19 AM IST

ಅಡುಗೆ ಸಿಲಿಂಡರ್ ಸ್ಪೋಟ

ಆನೇಕಲ್:ಸಿಲಿಂಡರ್ ಸ್ಫೋಟಗೊಂಡ ಪರಿಣಾಮ, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಜಿಲ್ಲೆ ಆನೇಕಲ್ ತಾಲೂಕಿನ ರಾಜಾಪುರದಲ್ಲಿ ನಡೆದಿದೆ.

ಆನೇಕಲ್​ ಸಿಲಿಂಡರ್ ಸ್ಪೋಟ

ಸಂಜೆ ಅಡುಗೆ ಮಾಡಲು ಮನೆಯಲ್ಲಿದ್ದ ಸಿಲಿಂಡರ್ ಬದಲಾವಣೆ ಮಾಡುವ ಸಮಯದಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡರ್​​ ಸ್ಪೋಟಗೊಂಡಿದೆ. ಘಟನೆಯಲ್ಲಿ ಪರಮೇಶ್ವರಯ್ಯ, ಹೊನ್ನಮ್ಮ ಮತ್ತು ಯತೀಶ್ ದೇವರ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಸ್ಪೋಟಗೊಂಡ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಚಿದ್ರ ಚಿದ್ರಗಳಾಗಿವೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಪ್ರಮುಖ ಕಾರಣ ಸಿಲಿಂಡರ್​ ಅನಿಲ ಸೋರಿಕೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ABOUT THE AUTHOR

...view details