ಕರ್ನಾಟಕ

karnataka

By

Published : Aug 24, 2020, 3:49 PM IST

ETV Bharat / state

ಬೆಂಗಳೂರು ಗಲಭೆ ಪ್ರಕರಣ: ಘಟನೆಯಲ್ಲಿ ಶಂಕಿತ ಉಗ್ರ ರೆಹಮಾನ್​ ಕೈವಾಡ ಕುರಿತು ಸಿಸಿಬಿ ತನಿಖೆ

ಜೆಡಿಎಸ್ ಮುಖಂಡ ವಾಜೀದ್ ಹಾಗೂ ಜೈದ್ ಇಬ್ಬರು ಘಟನೆ‌‌ ನಡೆದಾಗ ಸಂಪರ್ಕದಲ್ಲಿದ್ದರು. ‌ಹೀಗಾಗಿ ಇಬ್ಬರನ್ನೂ ಸಿಸಿಬಿ ಅಧಿಕಾರಿಗಳು ಪ್ರತ್ಯೇಕ ವಿಚಾರಣೆಗೆ ಒಳಪಡಿಸಿದ್ದಾರೆ. ಇದಲ್ಲದೆ ಬಂಧಿತ ಕೆಲ ಆರೋಪಿಗಳಿಗೆ ಉಗ್ರರ ಜೊತೆ ನಂಟಿರೋ ಅನುಮಾನದ ಮೇರೆಗೆ‌ ವಿಚಾರಣೆ ಮುಂದುವರಿದಿದೆ.

Bengaluru riot case: CCB probe into  Rahman
ಬೆಂಗಳೂರು ಗಲಭೆ ಪ್ರಕರಣ: ಘಟನೆಯಲ್ಲಿ ಶಂಕಿತ ಉಗ್ರ ರೆಹಮಾನ್​ ಕೈವಾಡ ಕುರಿತು ಸಿಸಿಬಿ ತನಿಖೆ

ಬೆಂಗಳೂರು:ಚರ್ಚ್ ಸ್ಟ್ರೀಟ್​​ ಬಾಂಬ್​ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪಿಯ ಸಂಬಂಧಿ ಜೈದ್ ವಿಚಾರಣೆಯನ್ನು ಸಿಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.

ಸದ್ಯ ಜೆಡಿಎಸ್ ಮುಖಂಡ ವಾಜೀದ್ ಹಾಗೂ ಜೈದ್ ಇಬ್ಬರು ಘಟನೆ‌‌ ನಡೆದಾಗ ಸಂಪರ್ಕದಲ್ಲಿದ್ದರು. ‌ಹೀಗಾಗಿ ಇಬ್ಬರನ್ನೂ ಪ್ರತ್ಯೇಕ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಗೂ ಮೊದಲು ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಉಗ್ರರ ಸಂಪರ್ಕದ ಕುರಿತಂತೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಸದ್ಯ ಬಂಧಿತ ಕೆಲ ಆರೋಪಿಗಳಿಗೆ ಉಗ್ರರ ಜೊತೆ ನಂಟಿರೋ ಅನುಮಾನದ ಮೇರೆಗೆ‌ ಅವರನ್ನೆಲ್ಲ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಸವನಗುಡಿಯಲ್ಲಿ ಶಂಕಿತ ಉಗ್ರ ರೆಹಮಾನ್​​ನನ್ನು ಎನ್ಐಎ ಬಂಧಿಸಿತ್ತು. ಈತ ಹಲವಾರು ವರ್ಷಗಳಿಂದ ನಗರದಲ್ಲೇ ವಾಸವಿರುವ ಕಾರಣ‌ ಆತನ ಮೇಲೂ ಸಿಸಿಬಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.

ಗಲಭೆಗೂ ಆತನಿಗೂ ಸಂಬಂಧ ಇದೆಯಾ ಎನ್ನುವ ಶಂಕೆ ಸಹ ಇದ್ದು, ಈ ಹಿನ್ನೆಲೆಯಲ್ಲೂ ತನಿಖೆ ಚುರುಕಾಗಿದೆ. ಆರೋಪಿಗಳ ಮೊಬೈಲ್ ಕುರಿತ ಮಾಹಿತಿಯನ್ನು ಎನ್​​ಐಎ ಅಧಿಕಾರಿಗಳೊಂದಿಗೆ ಚರ್ಚಿಸಲು ತಯಾರಿ ನಡೆಸಿದ್ದಾರೆ.

ABOUT THE AUTHOR

...view details