ಕರ್ನಾಟಕ

karnataka

ETV Bharat / state

ಏರ್​​​​​​​​ ಶೋ ವೇಳೆ ಸುಟ್ಟ ಕಾರ್​​​​ಗಳ ಮಾಲೀಕರಿಗೆ ಆರ್​​​​ಟಿಒದಿಂದ ಶೀಘ್ರ ಪರಿಹಾರ

ಇಂದಿಗೂ ವಾಹನದ ಮಾಲೀಕರು ಕಾರ್ ಇನ್ಶೂರೆನ್ಸ್ ಪಡೆಯಲು, ವಾಹನದ ರೆಕಾರ್ಡ್ (ಆರ್​​​​​​ಸಿ) ರದ್ದು ಮಾಡಿಸಲು ಓಡಾಟ ನಡೆಸುತ್ತಿದ್ದಾರೆ. ಆದ್ರೆ ಸಾರಿಗೆ ಇಲಾಖೆಯ ವತಿಯಿಂದ ಪ್ರತೀ ಆರ್​​ಟಿಒ( ಪ್ರಾದೇಶಿಕ ಸಾರಿಗೆ ಪ್ರಾಧಿಕಾರ)ಗಳಲ್ಲಿ ವಾಹನ ಕಳೆದುಕೊಂಡ ಮಾಲೀಕರಿಗೆ ಶೀಘ್ರವಾಗಿ ಕೆಲಸ ಮಾಡಿಕೊಡಲಾಗ್ತಿದೆ.

By

Published : Mar 13, 2019, 9:13 PM IST

ಆರ್​​​​ಟಿಒ

ಬೆಂಗಳೂರು: ಕಳೆದ ಫೆಬ್ರವರಿ 23 ರಂದು ಏರ್ ಶೋ ವೇಳೆ ನಡೆದ ದುರ್ಘಟನೆಯಲ್ಲಿ ಮುನ್ನೂರಕ್ಕೂ ಅಧಿಕ ಕಾರ್​​​ಗಳು ಬೆಂಕಿಗೆ ಆಹುತಿಯಾಗಿದ್ದವು.

ಇಂದಿಗೂ ವಾಹನದ ಮಾಲೀಕರು ಕಾರ್ ಇನ್ಶೂರೆನ್ಸ್ ಪಡೆಯಲು, ವಾಹನದ ರೆಕಾರ್ಡ್ (ಆರ್​​​​​​ಸಿ) ರದ್ದು ಮಾಡಿಸಲು ಓಡಾಟ ನಡೆಸುತ್ತಿದ್ದಾರೆ. ಆದ್ರೆ ಸಾರಿಗೆ ಇಲಾಖೆಯ ವತಿಯಿಂದ ಪ್ರತೀ ಆರ್​​ಟಿಒ( ಪ್ರಾದೇಶಿಕ ಸಾರಿಗೆ ಪ್ರಾಧಿಕಾರ)ಗಳಲ್ಲಿ ವಾಹನ ಕಳೆದುಕೊಂಡ ಮಾಲೀಕರಿಗೆ ಶೀಘ್ರವಾಗಿ ಕೆಲಸ ಮಾಡಿಕೊಡಲಾಗ್ತಿದೆ.

ಅದರಲ್ಲೂ ಯಶವಂತಪುರ ಆರ್​​ಟಿಒ ಕಚೇರಿಯಲ್ಲಿ ಬೇರೆಲ್ಲಾ ಕಡತಗಳನ್ನು ಬದಿಗಿಟ್ಟು ಏರ್ ಶೋ ದುರ್ಘಟನೆಯಲ್ಲಿ ಕಾರ್ ಕಳೆದುಕೊಂಡವರ ಕೆಲಸವನ್ನು ಮೊದಲು ಮಾಡಿಕೊಡಲಾಗುತ್ತಿದೆ. ಈ ಆರ್​​​ಟಿಒ ವ್ಯಾಪ್ತಿಗೆ ಒಟ್ಟು 44 ಕಾರ್​​ಗಳು ಬಂದಿವೆ. ಇದರಲ್ಲಿ 26 ಅರ್ಜಿಗಳು ಆರ್​​​​​​ಸಿ ಕ್ಯಾನ್ಸಲೇಷನ್​​​ಗೆ ಅರ್ಜಿ ಹಾಕಿದ್ದು, ಈವರೆಗೂ 20 ಪ್ರಕರಣಗಳ ಗಾಡಿ ರೆಕಾರ್ಡ್ ಕ್ಯಾನ್ಸಲ್ ಮಾಡಿಸಿ, ಟ್ಯಾಕ್ಸ್ ಹಣವನ್ನು ಮರುಪಾವತಿ ಮಾಡಲಾಗಿದೆ ಎಂದು ಉಪ ಸಾರಿಗೆ ಆಯುಕ್ತರಾದ ಬಾಲಕೃಷ್ಣ ಈಟಿವಿ ಭಾರತ್​​ಗೆ ತಿಳಿಸಿದ್ದಾರೆ.

ಕಾರ್​ ಮಾಲೀಕರಿಗೆ ಶೀಘ್ರವೇ ಪರಿಹಾರ

ಇಲ್ಲಿಂದ ಈ ಪ್ರಮಾಣಪತ್ರ ತೆಗೆದುಕೊಂಡು ಇನ್ಶೂರೆನ್ಸ್​​ ಅವರ ಬಳಿ ನೀಡಿದ್ರೆ ಅವರಿಗೆ ಸಿಗುವ ಇನ್ಶೂರೆನ್ಸ್ ಮೊತ್ತ ಸಿಗಲಿದೆ. ಹಾಗಾಗಿ ಆರ್​​​ಟಿಒ ಕಡೆಯಿಂದ ಆಗಬೇಕಾದ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡಲಾಗ್ತಿದೆ ಎಂದು ಅವರು ತಿಳಿಸಿದರು. ಅಲ್ಲದೆ ಒಂದೇ ದಿನಕ್ಕೆ ಆರ್​​​​ಟಿಒ ಕೆಲಸ ಮಾಡಿಕೊಟ್ಟಿದ್ದು, ಸರ್ಕಾರಿ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಕಾರ್ ಮಾಲೀಕರಾದ ಸಿಮಿ ತಿಳಿಸಿದರು.

ಉಳಿದ 10 ಆರ್​​ಟಿಒ ಆಫೀಸ್​​ಗಳಾದ ಕೋರಮಂಗಲ, ರಾಜಾಜಿನಗರ, ಇಂದಿರಾನಗರ, ಜಯನಗರ, ಕೆ.ಆರ್.ಪುರಂ, ಚಂದಾಪುರ, ನೆಲಮಂಗಲ, ದೇವನಹಳ್ಳಿ, ಯಲಹಂಕ, ರಾಮನಗರಗಳಲ್ಲೂ ಇದೇ ಸೂಚನೆ ನೀಡಲಾಗಿದ್ದು, ಎಲೆಕ್ಷನ್ ಕೆಲಸವೂ ಬಂದಿರೋದ್ರಿಂದ ವ್ಯತ್ಯಾಸಗಳಾಗ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details