ಬೆಂಗಳೂರು:ಕನಿಷ್ಠ ಸಂಬಳಕ್ಕಾಗಿ ಸ್ಮಶಾನಗಳಲ್ಲಿ, ವಿದ್ಯುತ್ ಚಿತಾಗಾರಗಳಲ್ಲಿ ಕೆಲಸ ಮಾಡುವ ಬಿಬಿಎಂಪಿ ನೌಕರರು ಸಹಾ ಕೊರೊನಾ ಪಿಡುಗು ತಡೆಗಟ್ಟಲು ಸರ್ಕಾರಕ್ಕೆ ಆರ್ಥಿಕ ಸಹಕಾರ ನೀಡಿದ್ದಾರೆ.
ಕೊರೊನಾ ಪರಿಹಾರ ನಿಧಿಗೆ ರುದ್ರಭೂಮಿ ನೌಕರರಿಂದ ದಾನ
ರಾಜ್ಯ ಸರ್ಕಾರ ಕೊರೊನಾ ಸೋಂಕು ತಡೆಗಟ್ಟಲು ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ. ರಾಜ್ಯದ ಬಡಜನರ ಸೇವೆಗಾಗಿ, ಸ್ಮಶಾನದಲ್ಲಿ ಕೆಲಸ ಮಾಡುವ ನಮ್ಮ ಒಂದು ತಿಂಗಳ ಸಂಬಳವನ್ನೂ ಸರ್ಕಾರಕ್ಕೆ ನೀಡಲು ನಿರ್ಧರಿಸಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಗೆ ನೌಕರರು ಮನವಿ ಪತ್ರವನ್ನು ನೀಡಿದ್ದಾರೆ.
ಕೊರೊನಾ ಪರಿಹಾರ ನಿಧಿಗೆ ದಾನ ಮಾಡಿದ ರುದ್ರಭೂಮಿ ನೌಕರರು
ರಾಜ್ಯ ಸರ್ಕಾರ ಕೊರೊನಾ ಸೋಂಕು ತಡೆಗಟ್ಟಲು ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ. ರಾಜ್ಯದ ಬಡಜನರ ಸೇವೆಗಾಗಿ, ಸ್ಮಶಾನದಲ್ಲಿ ಕೆಲಸ ಮಾಡುವ ನಮ್ಮ ಒಂದು ತಿಂಗಳ ಸಂಬಳವನ್ನೂ ಸರ್ಕಾರಕ್ಕೆ ನೀಡಲು ನಿರ್ಧರಿಸಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಗೆ ಮನವಿ ಪತ್ರವನ್ನು ನೀಡಿದ್ದಾರೆ.
ಆದ್ರೆ ಇನ್ನೊಂದೆಡೆ ಪಾಲಿಕೆ ಕಾಲಕಾಲಕ್ಕೆ ಸ್ಮಶಾನ ಕೆಲಸಗಾರರಿಗೆ ಸಂಬಳ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈಗಾಗಲೇ ಆರೇಳು ತಿಂಗಳ ವೇತನವನ್ನ ಬಿಬಿಎಂಪಿ ಕೊಡದೇ ಬಾಕಿ ಉಳಿಸಿಕೊಂಡಿರುವುದಾಗಿ ನೌಕರರು ದೂರಿದ್ದಾರೆ.