ಬೆಂಗಳೂರು:ರಾಜರಾಜೇಶ್ವರಿನಗರ ಉಪಚುನಾವಣೆ ಕಣದಲ್ಲಿ ಅಂತಿಮವಾಗಿ 16 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
ಆರ್ಆರ್ ನಗರ ಉಪಚುನಾವಣೆಯ ಅಂತಿಮ ಕಣದಲ್ಲಿ 16 ಅಭ್ಯರ್ಥಿಗಳು
ಇಂದು ಆನಂದ್ ಸಿ, ಆರ್ ಕುಮಾರ್, ಮುನಿರತ್ನ, ಮುನಿರತ್ನಮ್ಮ ನಾಮಪತ್ರ ವಾಪಸು ಪಡೆದಿದ್ದು, ಅಂತಿಮವಾಗಿ 16 ಮಂದಿ ಉಳಿದಿದ್ದಾರೆ.
ಆರ್ ಆರ್ ನಗರ ಉಪಚುನಾವಣೆ
ಒಟ್ಟು 23 ಮಂದಿ ಅಭ್ಯರ್ಥಿಗಳು 27 ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರಲ್ಲಿ ಪರಿಷ್ಕರಣೆ ಬಳಿಕ 20 ನಾಮಪತ್ರಗಳು ಉಳಿದಿದ್ದವು. ಇದೀಗ 4 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 16 ಮಂದಿ ಉಳಿದಿದ್ದಾರೆ. ಇಂದು ಆನಂದ್ ಸಿ, ಆರ್ ಕುಮಾರ್, ಮುನಿರತ್ನ, ಮುನಿರತ್ನಮ್ಮ ನಾಮಪತ್ರ ವಾಪಸು ಪಡೆದಿದ್ದಾರೆ.
ಶಿರಾ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, 15 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.