ಕರ್ನಾಟಕ

karnataka

By

Published : Jul 16, 2019, 4:24 PM IST

ETV Bharat / state

ಸುಪ್ರೀಂ ತೀರ್ಪಿನ ಬಗ್ಗೆ ಆತಂಕ: ರೆಸಾರ್ಟ್​ನಿಂದ ಹೊರ ಬಾರದ ಜೆಡಿಎಸ್​​ ಶಾಸಕರು

ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್​ಗೆ ಜೆಡಿಎಸ್ ಶಾಸಕರು ಬಂದು ಒಂದು ವಾರ ಕಳೆದಿದೆ. ಪ್ರತಿ ದಿನ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದ ಜೆಡಿಎಸ್ ಶಾಸಕರು ಇಂದು ಕೂಡ ಒಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.

ರೆಸಾರ್ಟ್ ನಿಂದ ಹೊರಗೆ ಬಾರದ ಜೆಡಿಎಸ್ ಶಾಸಕರು

ಬೆಂಗಳೂರು: ಕಳೆದ ಒಂದು ವಾರದಿಂದ ರೆಸಾರ್ಟ್ ಸುತ್ತಮುತ್ತ ತಿರುಗಾಡುತ್ತಿದ್ದ ಜೆಡಿಎಸ್ ಶಾಸಕರು ಇಂದು ರೆಸಾರ್ಟ್ ಬಿಟ್ಟು ಹೊರ ಬಂದಿಲ್ಲ. ಅಲ್ಲದೇ ಎಲ್ಲಾ ಶಾಸಕರು ಟಿವಿ ಮುಂದೆ ಕುಳಿತಿದ್ದು, ಸರ್ಕಾರದ ಭವಿಷ್ಯ ಏನಾಗುತ್ತದೆ ಅನ್ನೋ ಟೆನ್ಷನ್​​ನಲ್ಲಿದ್ದಾರೆ.

ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್​ಗೆ ಜೆಡಿಎಸ್ ಶಾಸಕರು ಬಂದು ಒಂದು ವಾರ ಕಳೆದಿದೆ. ಪ್ರತಿ ದಿನ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದ ಜೆಡಿಎಸ್ ಶಾಸಕರು ಇಂದು ಕೂಡ ಒಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.

ರೆಸಾರ್ಟ್​ನಿಂದ ಹೊರಗೆ ಬಾರದ ಜೆಡಿಎಸ್ ಶಾಸಕರು
ರಾಜಕೀಯ ಜಂಜಾಟ, ಕೊಡಗುರ್ಕಿಯಲ್ಲಿ ಬಾಡೂಟ, ದೇವಸ್ಥಾನಕ್ಕೆ ಹೋಗಿ ಬರುವ ಹವ್ಯಾಸ, ತಮ್ಮ ತಮ್ಮ ಕ್ಷೇತ್ರದ ಕೆಲಸಗಳನ್ನು ರೆಸಾರ್ಟ್​ನಲ್ಲೇ ಮಾಡುವ ಮೂಲಕ ಸುದ್ದಿಯಾಗುತ್ತಿದ್ದ ಜೆಡಿಎಸ್ ಶಾಸಕರು ಇಂದು ರೆಸಾರ್ಟ್​ನಿಂದ ಹೊರ ಬರದೆ ಸುದ್ದಿಯಾಗಿದ್ದಾರೆ. ಯಾವುದೇ ಕ್ಷೇತ್ರದ ಕೆಲಸವಾಗಲಿ, ಹೊರಗಡೆ ಸುತ್ತಾಡುವ ಕಾರ್ಯವಾಗಲಿ ಅಥವಾ ಬೆಂಬಲಿಗರು ಮತ್ತು ಕಾರ್ಯಕರ್ತರನ್ನು ನೋಡಿ ಮಾತನಾಡಿಸುವಂತಹ ಯಾವುದೇ ಕೆಲಸ ಮಾಡುತ್ತಿಲ್ಲ. ಬದಲಾಗಿ ಇಂದು ಸುಪ್ರೀಂ ಕೋರ್ಟ್​ನಲ್ಲಿ ನಡೆದ ಸರ್ಕಾರದ ಭವಿಷ್ಯದ ಕುರಿತ ತೀರ್ಪಿಗಾಗಿ ಕಾಯುತ್ತಾ ಫುಲ್ ಟೆನ್ಷನ್​ನಲ್ಲಿದ್ದರು ಎನ್ನಲಾಗಿದೆ.

For All Latest Updates

TAGGED:

Devanahalli

ABOUT THE AUTHOR

...view details