ಆನೇಕಲ್: ಹಾನಗಲ್ ಹಾಲಿ ಶಾಸಕ, ಮಾಜಿ ಮಂತ್ರಿ ಸಿಎಂ ಉದಾಸಿ ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ಆನೇಕಲ್ ನಾರಾಯಣ ಹೆಲ್ತ್ ಸಿಟಿಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಯಡಿಯೂರಪ್ಪ ಆಗಮನಕ್ಕೂ ಮುನ್ನ ಆಗಮಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಸಿಎಂ ಉದಾಸಿ ಅತ್ಯಾಪ್ತ ಸ್ನೇಹಿತರಾದ್ದರಿಂದ ಮೂರ್ನಾಲ್ಕು ತಾಸು ಸಿಎಂ ಉದಾಸಿ ಮಗ ಸಂಸದ ಶಿವಕುಮಾರ್ ರೊಂದಿಗೆ ದೀರ್ಘ ಮಾತುಕತೆ ನಡೆಸಿ ಸಂಜೆವರೆಗೂ ಆಸ್ಪತ್ರೆಯಲ್ಲಿದ್ದು ತೆರಳಿದರು.
ಬೊಮ್ಮಸಂದ್ರ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಜುಂದಾರ್ ಷಾ ಆಸ್ಪತ್ರೆಗೆ ಸಿಎಂ ಉದಾಸಿ ಮೂರು ದಿನಗಳ ಹಿಂದೆ ದಾಖಲಾಗಿದ್ದರು. ಅವರಿಗೆ ಆರೋಗ್ಯ ಸ್ಥಿತಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ರಾಜಕಾರಣಿಗಳ ದಂಡು ಆಸ್ಪತ್ರೆಯತ್ತ ಮುಖ ಮಾಡಿವೆ. ಮಾಧ್ಯಮ ಕ್ಯಾಮೆರಾಗಳನ್ನ ಕಂಡ ಕಂದಾಯ ಸಚಿವರು ಮಾಧ್ಯಮದವರನ್ನ ಬಿಡಬೇಡಿ ಎಂದು ಕಟ್ಟಪ್ಪಣೆ ಮಾಡಿ ಹೇಳಿಕೆ ನೀಡುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿ ಆಸ್ಪತ್ರೆಗೆ ತೆರಳಿದರು.