ಕರ್ನಾಟಕ

karnataka

ETV Bharat / state

ಪ್ರವಾಹದಿಂದ ಮುಳಗಡೆಗೊಂಡ ಐತಿಹಾಸಿಕ ಸ್ಮಾರಕಗಳು: ಆದರೂ ಸೆಲ್ಫಿಗಾಗಿ ಮುಗಿಬಿದ್ದ ಜನ

ಪ್ರವಾಹದಿಂದ ಮುಳಗಡೆ ಆಗಿರುವ ಐತಿಹಾಸಿಕ ಸ್ಮಾರಕಗಳು, ಪ್ರವಾಸಿಗರು ವೀಕ್ಷಣೆ ಮಾಡುವ ಸಂಖ್ಯೆ ಕಡಿಮೆ ಆಗಿದ್ದರೆ,ಸ್ಥಳೀಯರು ವೀಕ್ಷಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ.

By

Published : Aug 10, 2019, 11:50 PM IST

ಪ್ರವಾಹದಿಂದ ಮುಳಗಡೆಗೊಂಡ ಐತಿಹಾಸಿಕ ಸ್ಮಾರಕಗಳು: ಆದರೂ ಸೆಲ್ಫಿಗಾಗಿ ಮುಗಿಬಿದ್ದ ಜನ

ಬಾಗಲಕೋಟೆ: ಜಿಲ್ಲೆಯ ಕೃಷ್ಣಾ, ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಗಳ ಪ್ರವಾಹದಿಂದ ಗ್ರಾಮದಲ್ಲಿನ ಸ್ಮಾರಕಗಳು ಹಾಗೂ ಸೇತುವೆಗಳು ಮುಳಗಡೆಯಿಂದಾಗಿ ಸಾಕಷ್ಟು ಜನ ತೊಂದರೆಗಿಡಾದರೆ, ಮತ್ತಷ್ಟು ಜನರಿಗೆ ಇದೆ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.

ಪ್ರವಾಹದಿಂದ ಮುಳಗಡೆಗೊಂಡ ಐತಿಹಾಸಿಕ ಸ್ಮಾರಕಗಳು: ಆದರೂ ಸೆಲ್ಫಿಗಾಗಿ ಮುಗಿಬಿದ್ದ ಜನ

ಹೌದು, ಬಾದಾಮಿ ಚಾಲುಕ್ಯರು ಆಳಿದ ಕಾಲದಲ್ಲಿ ನಿರ್ಮಾಣ ಆಗಿರುವ ಪಟ್ಟದಕಲ್ಲು ಸಂಪೂರ್ಣ ಜಲಾವೃತಗೊಂಡಿದೆ. ಹೀಗೆ ಜಲಾವೃತಗೊಂಡಿರುವ ಕಾಟಾಪೂರ- ಪಟ್ಟದಕಲ್ಲು ನೋಡಲು ಗುಡೂರು, ಬಾದಾಮಿ, ಬಾಗಲಕೋಟೆಯಿಂದ ಜನರು ಬರುತ್ತಿದ್ದಾರೆ. ನೀರಿನ ಒಳಗೆ ಹೋಗಿ ಸೆಲ್ಫಿ , ಫೋಟೋ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗುತ್ತಿದೆ.

ಇದರಿಂದ ಪೊಲೀಸರಿಗೆ ಕಿರಿಕಿರಿ ಉಂಟಾಗಿದ್ದು, ಏನಾದರೂ ಅನಾಹುತ ಆದಲ್ಲಿ, ಅಧಿಕಾರಗಳ ಮೇಲೆ ಬರುತ್ತದೆ ಎಂದು ಪೊಲೀಸ್ ಅಂಜಿಕೆಯಲ್ಲಿದ್ದರೆ, ಯಾವುದೇ ಅಂಜಿಕೆ ಇಲ್ಲದೇ ಜನರು ನೀರಿನ ಒಳಗೆ ‌ನುಗ್ಗಿ ಫೋಟೋ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗಿದೆ.

ABOUT THE AUTHOR

...view details