ಕರ್ನಾಟಕ

karnataka

By

Published : May 19, 2022, 7:08 AM IST

ETV Bharat / state

ಪಿಎಸ್‌ಐ ಅಭ್ಯರ್ಥಿಗಳಿಂದ ಹಣ ಪಡೆದು ಡೀಲ್‌; ಕೋಚಿಂಗ್ ಸೆಂಟರ್‌ ಮಾಜಿ ನಿರ್ದೇಶಕ ಸಿಐಡಿ ವಶ

ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌​ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಧಾರವಾಡದ ಕೋಚಿಂಗ್ ಸೆಂಟರ್‌ವೊಂದರ ಮಾಜಿ ನಿರ್ದೇಶಕನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ.

coaching centre former director detained by CID, coaching centre former director detained by CID in Bagalkot, Bagalkot news, PSI scam, PSI requirement scam, ಕೋಚಿಂಗ್ ಸೆಂಟರ್ ಮಾಜಿ ನಿರ್ದೇಶಕ ಸಿಐಡಿ ವಶಕ್ಕೆ, ಕೋಚಿಂಗ್ ಸೆಂಟರ್ ಮಾಜಿ ನಿರ್ದೇಶಕ ಬಾಗಲಕೋಟೆಯಲ್ಲಿ ಸಿಐಡಿ ವಶಕ್ಕೆ, ಬಾಗಲಕೋಟೆ ಸುದ್ದಿ, ಪಿಎಸ್​ಐ ಹಗರಣ, ಪಿಎಸ್​ಐ ನೇಮಕಾತಿ ಹಗರಣ,
ಕೋಚಿಂಗ್ ಸೆಂಟರ್​ನ ಮಾಜಿ ನಿರ್ದೇಶಕ ಯಲ್ಲಮ್ಮನ ದೇವಸ್ಥಾನದಲ್ಲಿ ಸಿಐಡಿ ವಶಕ್ಕೆ

ಬಾಗಲಕೋಟೆ: ಪಿಎಸ್​ಐ ನೇಮಕಾತಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಾಲ್ಕೈದು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಧಾರವಾಡದ ಕೋಚಿಂಗ್ ಸೆಂಟರ್‌ನ ಮಾಜಿ ನಿರ್ದೇಶಕನನ್ನು ಸಿಐಡಿ ಅಧಿಕಾರಿಗಳು ಯರಗಟ್ಟಿ ಯಲ್ಲಮ್ಮ ದೇವಸ್ಥಾನದಲ್ಲಿ ವಶಕ್ಕೆ ಪಡೆದರು. ಶ್ರೀಕಾಂತ ಚೌರಿ ಪೊಲೀಸರು ವಶಕ್ಕೆ ಪಡೆದ ಆರೋಪಿ. ಈತ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ನಿವಾಸಿ. ಪಿಎಸ್‍ಐ ಅಭ್ಯರ್ಥಿಗಳಿಂದ ಲಕ್ಷಾಂತರ ಹಣ ಪಡೆದು ಡೀಲ್ ಕುದುರಿಸಿರುವ ಗುರುತರ ಆರೋಪ ಈತನ ಮೇಲಿದೆ.

ಇದನ್ನೂ ಓದಿ:PSI ನೇಮಕಾತಿ ಅಕ್ರಮ: ಆರೋಪಿಯೊಬ್ಬನ ಮನೆಯಲ್ಲಿ 20ಲಕ್ಷ ನಗದು ಪತ್ತೆ!

ಮೇ 14ರಂದು ಜಮಖಂಡಿ ನಗರದಲ್ಲಿ ಶ್ರೀಕಾಂತ್​ ಚೌರಿ ಮದುವೆಯಾಗಿದೆ. ಈ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು ಭಾಗಿಯಾಗಿದ್ದರು ಎನ್ನಲಾಗಿದೆ. ಮದುವೆಯ ಬಳಿಕ ರಬಕವಿ, ಬನಹಟ್ಟಿ ತಾಲೂಕಿನ ಯರಗಟ್ಟಿ ಯಲ್ಲಮ್ಮ ದೇವಸ್ಥಾನಕ್ಕೆ ಕುಟುಂಬಸಹಿತ ಆರೋಪಿ ದರ್ಶನಕ್ಕೆ ತೆರಳಿದ್ದ. ಈ ಮಾಹಿತಿ ಪಡೆದ ಸಿಐಡಿ ಅಧಿಕಾರಿಗಳು ಶ್ರೀಕಾಂತ್​ ಚೌರಿಯನ್ನು ದೇವಸ್ಥಾನದಲ್ಲೇ ವಶಕ್ಕೆ ‌ಪಡೆದರು.

ಶ್ರೀಕಾಂತ್​ ಚೌರಿ ನಡೆಸುತ್ತಿದ್ದ ಕೋಚಿಂಗ್ ಸೆಂಟರ್ ವಿರುದ್ಧ ಬೆಂಗಳೂರು ಪೊಲೀಸರಿಗೆ ಪತ್ರದ ಮುಖೇನ ದೂರು ಬಂದಿದ್ದು, ಕಳೆದ ಕೆಲ ದಿನಗಳಿಂದ ಸಿಐಡಿ ಪೋಲಿಸರು ಜಮಖಂಡಿಯಲ್ಲೇ ಬೀಡುಬಿಟ್ಟಿದ್ದರು. ಆರೋಪಿಯನ್ನು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಬೆಂಗಳೂರಿಗೆ ಕರೆದುಕೊಂಡು ‌ಹೋಗಿದ್ದಾರೆ ಎನ್ನಲಾಗ್ತಿದೆ.

ABOUT THE AUTHOR

...view details