ಕರ್ನಾಟಕ

karnataka

By

Published : Dec 3, 2021, 3:17 PM IST

ETV Bharat / sports

ಐಪಿಎಲ್​ ಮೆಗಾ ಹರಾಜು.. ಚೆನ್ನೈ ತಂಡದ ಎಲ್ಲ ಸ್ಟಾರ್​​​ ಪ್ಲೇಯರ್ಸ್​​​​​​ ಮರಳಿ ಪಡೆಯಲು ಯತ್ನಿಸಲಾಗುವುದೆಂದ ಸಿಇಒ

ಸುದ್ದಿಗೋಷ್ಠಿವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಚೆನ್ನೈ ತಂಡದ ಸಿಇಒ ಕಾಶಿ ವಿಶ್ವನಾಥನ್​, ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್​ ಸೇರಿದಂತೆ ಪ್ರಮುಖ ಪ್ಲೇಯರ್ಸ್​​ಗಳನ್ನ ತಂಡಕ್ಕೆ ಸೇರಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ..

CSK retention
CSK retention

ಹೈದರಾಬಾದ್ ​​:2022ರ ಇಂಡಿಯನ್​​ ಪ್ರೀಮಿಯರ್ ಲೀಗ್​​ಗಾಗಿ ಎಲ್ಲ ತಂಡಗಳು ಈಗಾಗಲೇ ತಮ್ಮಿಷ್ಟದ ಕೆಲ ಪ್ಲೇಯರ್ಸ್​ಗೆ ರಿಟೈನ್ ಮಾಡಿಕೊಂಡಿವೆ.

ಅದರಂತೆ 2021ರ ಚಾಂಪಿಯನ್​ ತಂಡ ಚೆನ್ನೈ ಸೂಪರ್​​ ಕಿಂಗ್ಸ್​​ ರವೀಂದ್ರ ಜಡೇಜಾ(16 ಕೋಟಿ), ಮಹೇಂದ್ರ ಸಿಂಗ್​ ಧೋನಿ(12 ಕೋಟಿ), ಮೊಯಿನ್​​ ಅಲಿ(8 ಕೋಟಿ) ಹಾಗೂ ಋತುರಾಜ್​ ಗಾಯಕ್ವಾಡ್​​(6 ಕೋಟಿ) ರಿಟೈನ್​ ಮಾಡಿಕೊಂಡಿದೆ.

ಇದೀಗ ಮುಂದಿನ ತಿಂಗಳು ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ತಂಡದ ಎಲ್ಲ ಸ್ಟಾರ್​​ ಪ್ಲೇಯರ್ಸ್​​​ ಮರಳಿ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಸಿಎಸ್​​ಕೆ ತಂಡದ ಸಿಇಒ ಕಾಶಿ ವಿಶ್ವನಾಥನ್​​ ತಿಳಿಸಿದ್ದಾರೆ.

ಇದನ್ನೂ ಓದಿರಿ:ರಿಯಲ್​​ ಎಸ್ಟೇಟ್​​ ಬ್ಯುಸಿನೆಸ್​​ನಲ್ಲಿ ನಷ್ಟ.. ಇಬ್ಬರು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ..

2020ರಲ್ಲಿ ಐಪಿಎಲ್​ ಚಾಂಪಿಯನ್​ ಆಗಿ ಹೊರ ಹೊಮ್ಮಿರುವ ಸಿಎಸ್​ಕೆ ತಂಡದಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್​ ಬ್ಯಾಟರ್​ ಫಾಫು ಡುಪ್ಲೆಸಿಸ್ ವೆಸ್ಟ್​​ ಇಂಡೀಸ್​​ನ ಡ್ವೇನ್​ ಬ್ರಾವೋ, ಲುಗ್ಡಿ ಎಗ್ಡಿ ಸೇರಿದಂತೆ ದೀಪಕ್​ ಚಹರ್​, ಶಾರ್ದೂಲ್​ ಠಾಕೂರ್​, ಅಂಬಾಟಿ ರಾಯುಡು, ಸ್ಯಾಮ್​​ ಕರ್ರನ್​​, ಜೋಶ್​ ಹ್ಯಾಜಲ್​​ವುಡ್​​​ನಂತಹ ಅನೇಕ ಪ್ಲೇಯರ್ಸ್​​ಗಳಿದ್ದರು. ಇದೀಗ ಅವರನ್ನ ತಂಡದಿಂದ ಕೈಬಿಡಲಾಗಿದೆ. ಹರಾಜು ವೇಳೆ ಖರೀದಿ ಮಾಡಲು ಸಿಎಸ್​​ಕೆ ಯೋಜನೆ ಹಾಕಿಕೊಂಡಿದೆ.

ಸುದ್ದಿಗೋಷ್ಠಿವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಚೆನ್ನೈ ತಂಡದ ಸಿಇಒ ಕಾಶಿ ವಿಶ್ವನಾಥನ್​, ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್​ ಸೇರಿದಂತೆ ಪ್ರಮುಖ ಪ್ಲೇಯರ್ಸ್​​ಗಳನ್ನ ತಂಡಕ್ಕೆ ಸೇರಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ABOUT THE AUTHOR

...view details