ಸಿಡ್ನಿ:2020-21 ಟೆಸ್ಟ್ ಸರಣಿಯ ಸಂದರ್ಭದಲ್ಲಿ ಬ್ರಿಸ್ಬೇನ್ನ ಗಬ್ಬಾದಲ್ಲಿ ಆಡುವುದಿಲ್ಲ ಎಂದು ಭಾರತದ ಸ್ಪಷ್ಟವಾಗಿ ಹಿಂಜರಿಕೆ ತೋರಿ ನಮ್ಮನ್ನು ವಿಚಲಿತರಾಗಿ ಮಾಡಿದರು. ಇದರಿಂದ ನಾವು 2-1ರಿಂದ ಸರಣಿ ಕಳೆದುಕೊಳ್ಳಲು ಕಾರಣವಾಯಿತು ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಹೇಳುವ ಮೂಲಕ ವಿವಾದವನ್ನುಂಟು ಮಾಡಿದ್ದಾರೆ.
ಭಾರತದ ವಿರುದ್ಧ ಆಡುವಾಗ ಉಂಟಾಗುವ ಸವಾಲಿನ ಒಂದು ಭಾಗವೆಂದರೆ ಅವರು ನಿಮ್ಮನ್ನು ನಿಬ್ಬೆರಗಾಗಿಸಲು ಮತ್ತು ಅಪ್ರಸ್ತುತವಾದ ವಿಷಯಗಳಿಂದ ನಿಮ್ಮನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಾರೆ. ಹಾಗಾಗಿ ನಾವು ಅವರ ಸರಣಿಯನ್ನು ಕಳೆದುಕೊಂಡೆವು " ಎಂದು ಪೈನ್ ಬುಧವಾರ ರಾತ್ರಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್ಸಿಜಿ) ನಡೆದ ಚಾಪೆಲ್ ಫೌಂಡೇಷನ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಅವರು ಗಬ್ಬಾಗೆ ಹೋಗುವುದಿಲ್ಲ ಎಂದು ಹೇಳಿದರು. ಆ ವೇಳೆ, ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನಮಗೆ ತಿಳಿದಿರಲಿಲ್ಲ. ಭಾರತೀಯರು ಈ ಗೊಂದಲದ ಸಂಪೂರ್ಣ ಲಾಭ ಪಡೆಕೊಂಡುರು. ಅಲ್ಲದೇ ಇಂತಹ ಸೈಡ್ ಸೋಗಳನ್ನು ಸೃಷ್ಟಿಸುವಲ್ಲಿ ಅವರು ನಿಸ್ಸೀಮರು ಎಂದು ಪೇನ್ ಬುಧವಾರ ರಾತ್ರಿ ಹೇಳಿದ್ದಾರೆ.