ನವದೆಹಲಿ:ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವ್ಯವಸ್ಥಾಪನಾ ಕಂಪನಿಗಳು ನೀಡಬೇಕಾಗಿರುವ ಪರಿಹಾರ ಮೊತ್ತ ಬಿಡುಗಡೆ ಮಾಡುವಂತೆ ಅವರು ಕೇಳಿಕೊಂಡಿದ್ದಾರೆ.
ಈ ಹಿಂದೆ ಅವರು ತಮ್ಮ ನಿರ್ವಹಣಾ ಕಂಪನಿಗಳಾಗಿದ್ದ ಪರ್ಸೆಪ್ಟ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಮತ್ತು ಪರ್ಸೆಪ್ಟ್ ಡಿ ಮಾರ್ಕ್ ಇಂಡಿಯಾ ಲಿಮಿಟೆಡ್ ಗಂಗೂಲಿಗೆ ಪರಿಹಾರ ನೀಡುವಂತೆ ನ್ಯಾಯಮಂಡಳಿ 2018ರಲ್ಲಿ ಆದೇಶ ನೀಡಿತ್ತು. ಆದರೆ ಇಲ್ಲಿಯವರೆಗೆ ಪರಿಹಾರ ಸಿಗದ ಕಾರಣ ಇದೀಗ ಬಾಂಬೆ ಹೈಕೋರ್ಟ್ ಮೊರೆಹೋಗಿದ್ದಾರೆ. ಜೊತೆಗೆ ಎರಡು ಕಂಪನಿಗಳು ತಮ್ಮ ಆಸ್ತಿ ಬಹಿರಂಗಪಡಿಸುವಂತೆ ಕೋರಿದ್ದಾರೆ.